Advertisement

Koratagere:ನಾಮ ಪತ್ರ ಸಲ್ಲಿಕೆ ವೇಳೆ ಮಹಿಳಾ ಪೇದೆಗೆ ಕಲ್ಲು ; ಆರೋಪಿ ಬಂಧನ

08:30 PM Apr 22, 2023 | Team Udayavani |

ಕೊರಟಗೆರೆ: ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಪಾರ ಜನಸ್ತೋಮದ ನಡುವೆ ಕರ್ತವ್ಯ ನಿರತ ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ಕಲ್ಲೆಸೆದು ಗಾಯಗೊಳಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊರಟಗೆರೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿ ಹೊಳವನಹಳ್ಳಿ ಹೋಬಳಿಯ ರೆಡ್ಡಿಹಳ್ಳಿ ವೆಂಕಟಾಪುರ ಗ್ರಾಮದ ರಂಗಧಾಮಯ್ಯ(52) ಎನ್ನುವವನಾಗಿದ್ದಾನೆ. ಆರೋಪಿಯು ತಹಶೀಲ್ದಾರ್ ಕಚೇರಿಯ ಗೇಟ್ ಬಳಿ ಅಪಾರ ಜನಸ್ತೋಮದ ನಡುವೆ ಒಳಗಡೆ ಪ್ರವೇಶಿಸಲು ಬಿಡಲಿಲ್ಲ ಎಂದು ಕುಪಿತಗೊಂಡು ಹಿಡಿ ಗಾತ್ರದ ಕಲ್ಲನ್ನು ಮಹಿಳಾ ಪೋಲಿಸ್ ಪೇದೆಯ ತಲೆಗೆಸೆದು ಗಾಯಗೊಳಿಸಿದ್ದ. ಘಟನೆ ನಡೆದ ನಂತರ  ತಲೆ‌ಮರೆಸಿಕೊಂಡಿದ್ದ.

ಆರೋಪಿ ಆರ್ .ವೆಂಕಟಾಪುರ ಗ್ರಾಮದ ಮನೆಯಲ್ಲಿದ್ದಾಗ ಸಿಪಿಐ ಸುರೇಶ್ ಮತ್ತು ಅವರ ತಂಡ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next