Advertisement

ಕೊರಟಗೆರೆ: ದಕ್ಷಿಣ ಕನ್ನಡ ಜಿಲ್ಲೆಗೆ ತೋವಿನಕೆರೆ ಹುಣಸೆ

09:34 PM Apr 24, 2022 | Team Udayavani |

ಕೊರಟಗೆರೆ:ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಯ ಹುಣಸೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವರು ತುಮಕೂರು ಎಪಿಎಂಸಿ ಮಾರುಕಟ್ಟೆ ಯಿಂದ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದಿರುವ ಹುಣಸೆಯನ್ನು ಖರೀದಿಸಿದರು.

Advertisement

ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಹುಣಸೆ ರಾಜ್ಯದಲ್ಲಿ ಉತ್ತಮವಾದ ಹೆಸರು ಪಡೆದಿದ್ದು ಅಂತರಾಷ್ಟ್ರೀಯ ಗಮನ ಸೆಳೆದಿದೆ ಇದು ಮುಂಡಾಜೆಯ ಕೃಷಿ ಪತ್ತಿನ ಸಹಕಾರ ಸಂಘದ ಗಜಾನಾನ ವಾಝೀ ಅವರ ಗಮನಕ್ಕೆ ಬಂದಿತು. ತುಮಕೂರು ಮಾರುಕಟ್ಟೆ ಗೆ ಬಂದು ಮಂಡಿ ವರ್ತಕರು,ಹುಣಸೆ ಬೆಳೆಗಾರರ ಜೊತೆ ಮಾತನಾಡಿದರು.

ತೋವಿನಕೆರೆ ಸುತ್ತಮುತ್ತಲಿನ ಬೆಳೆಗಾರರಿಂದ ನಿರಂತರವಾಗಿ ಹುಣಸೆ ಖರೀದಿಸುವುದಾಗಿ ಭರವಸೆ ನೀಡಿದರು. ಅದ್ಯಕ್ಷ ಜನಾರ್ಧನಗೌಡ ನಿರ್ದೇಶಕ, ಶಶಿಧರ ಕಲ್ಯಂಜ, ಸಂಜೀನಗೌಡ ಮಾಕಳ ಸಿಇಒ ನಾರಾಯಣ ಪಡ್ಡೆ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next