Advertisement

Koratagere: ಕುಸಿದು ಬಿದ್ದು ವಿದ್ಯಾರ್ಥಿ ಸಾವು; ಹೃದಯಾಘಾತ ಶಂಕೆ

07:52 PM Oct 07, 2024 | Team Udayavani |

ಕೊರಟಗೆರೆ: ರವೀಂದ್ರ ಭಾರತಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟ ಘಟನೆ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ಪಟ್ಟಣದ ರವೀಂದ್ರ ಭಾರತಿ ವಿದ್ಯಾಮಂದಿರ ಸಮೀಪವಿರುವ ಶಬೀನಾ ಬೇಗಮ್ ಎಂಬುವರ 9ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ರೆಹಮಾನ್ (15 ವರ್ಷ) ಸಾವಿಗೀಡಾದ ದುರ್ದೈವಿ.

ಘಟನೆ ವಿವರ:
ಮೃತ ಮಹಮ್ಮದ್ ರೆಹಮಾನ್‍ ಶಬೀನಾ ಬೇಗಂ ದಂಪತಿ ದತ್ತು ಪಡೆದಿದ್ದರು. ತಾಯಿಯೊಡನೆ ಮನೆಯ ಮೇಲ್ಚಾವಣಿ ಮೇಲ್ಭಾಗ ಬಟ್ಟೆ ಒಗೆದು ಒಣಗಾಕಿದ ಬಣ್ಣೆಯನ್ನ ತೆಗೆದುಕೊಂಡು ಬರಲು ಹೋದ ಸಂದರ್ಭದಲ್ಲಿ ತಾಯಿ ಶಬೀನಾ ಬೇಗಂ ಬಟ್ಟೆ ತಂದು ಒಂದೆರಡು ನಿಮಿಷಗಳಾದರೂ ಮಗ ಬಾರದಿದ್ದನ್ನು ಕಂಡು ಮತ್ತೆ ಮನೆ ಮೇಲ್ಭಾಗಕ್ಕೆ ಹೋಗಿ ನೋಡುವಷ್ಟರಲ್ಲಿ ಪುತ್ರ  ಕುಸಿದು ಬಿದ್ದಿರುವುದು ಕಂಡು ತಾಯಿ ಅಕ್ಕಪಕ್ಕದ ಮನೆಯವರ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳಿದಿದ್ದಾನೆ .

ಹೃದಯಾಘಾತ ಶಂಕೆ:
ಮೃತ ಮೊಹಮ್ಮದ್ ರೆಹಮಾನ್ ಆರೋಗ್ಯವಂತ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿ ಬಿದ್ದ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಿದ ಪೋಷಕರು ವೈದ್ಯರು ಚಿಕಿತ್ಸೆ ನೀಡಿದರೂ ಫಲಿಸದೆ ಹೃದಯಾಘಾತದಿಂದ ಕೊನೆಯುಸಿರು ಎಳೆದಿರಬಹುದು ಎಂದು ಊಹಿಸಲಾಗಿದೆ.

ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್, ಪಿಎಸ್‍ಐ ಚೇತನ್ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next