Advertisement

ಕೊರಟಗೆರೆ: ಕಾರು ಢಿಕ್ಕಿ; ಬೈಕ್ ಸವಾರರಿಗೆ ಗಂಭೀರ ಗಾಯ

09:40 PM Jun 30, 2022 | Team Udayavani |

ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿಯ ಮಾವತ್ತೂರು – ಗೊರವನಹಳ್ಳಿ ರಸ್ತೆ ಮೆಳೆಹಳ್ಳಿ ಸಮೀಪ ಕೊರಟಗೆರೆಯಿಂದ ಲಿಂಗಾಪುರಕ್ಕೆ ಬರುವಾಗ ಮಧ್ಯಾಹ್ನ 2.30ರ ವೇಳೆಗೆ ಮಾವತ್ತೂರು ಕಡೆಯಿಂದ ಬಂದ ಕಾರು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ  ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ.

Advertisement

ಗಾಯಾಳುಗಳಾದ ಗುಬ್ಬಿ ತಾಲೂಕಿನ ವಡವನಹಳ್ಳಿಯ ಯಶವಂತ್(16) ವರ್ಷ ಪುರದಹಳ್ಳಿ ಹಾಗೂ ಶಿವಕುಮಾರ್(24) ಎಂಬವರು ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಕಾರು ಚಾಲಕ ಚಂದ್ರಶೇಖರ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಬೈಕ್ ಓಡಿಸುತ್ತಿದ್ದ ಶಿವಕುಮಾರ್ ಎಡ ತೊಡೆಗೆ ಮತ್ತು ಕಾಲಿಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿರುತ್ತದೆ. ಈ ಸಂಬಂಧ ನವೀನ್ ನೀಡಿದ ದೂರಿನ ಮೇರೆಗೆ ಕೋಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಮಹಾಲಕ್ಷ್ಮಮ್ಮ, ಮುಖ್ಯ ಪೇದೆ ವೆಂಕಟೇಶ್. ಎನ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next