Advertisement

Koratagere: ವಾಹನ ಢಿಕ್ಕಿಯಾಗಿ ಕಡವೆ ಸಾವು

08:28 PM Jan 13, 2024 | Team Udayavani |

ಕೊರಟಗೆರೆ: ಪಟ್ಟಣದ ಹೊರವಲಯದ ಮಧುಗಿರಿ ಮತ್ತು ಕೊರಟಗೆರೆ ಬೈಪಾಸ್ ರಸ್ತೆಯ ಸಿದ್ದೇಶ್ವರ್ ಸಮುದಾಯ ಭವನದ ಬಳಿ ವಾಹನವೊಂದು ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಕಡವೆ ಸಾವನ್ನಪ್ಪಿದೆ.

Advertisement

ಶನಿವಾರ ಬೆಳಗಿನ ಜಾವ ನಡೆದಿದೆ ಎನ್ನಲಾಗಿದ್ದು, ಕಡವೆ ಸ್ಥಳದಲ್ಲಿಯೇ ಮೃತ ಪಟ್ಟಿದೆ. ಆಹಾರ ಅರಸಿ ಬಂದು ನಂತರ ಅರಣ್ಯದ ಕಡೆಗೆ ಹೋಗುವ ಸಮಯದಲ್ಲಿ ರಸ್ತೆ ದಾಟುತ್ತಿದ್ದ ಸಮಯದಲ್ಲಿ ಟೆಂಪೋ ಡಿಕ್ಕಿ ಹೊಡೆದ ರಭಸಕ್ಕೆ ಕೃಷ್ಣಮೃಗ ರಸ್ತೆ ಪಕ್ಕದ ಜಮೀನಿನಲ್ಲಿ ಬಿದ್ದಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ತತ್ ಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next