Advertisement

ಕೊರಟಗೆರೆ: ಮಳೆ ನೀರಿನಲ್ಲಿ ಮುಳುಗಿದ ಕರಡಿ ಮರಿ ಸಾವು

07:59 PM Oct 16, 2022 | Team Udayavani |

ಕೊರಟಗೆರೆ: ಮಳೆರಾಯನ ಆರ್ಭಟದಿಂದ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನು ದಾಟಲು ಯತ್ನಿಸಿದ ಮರಿ ಕರಡಿಯೊಂದು ನೀರಿನಲ್ಲಿ ಕೊಚ್ಚಿಹೋಗಿದ್ದು,ಮೃತದೇಹವು ಚಿಕ್ಕೆಗೌಡನಹಳ್ಳಿ ಗ್ರಾಮದ ಸಮೀಪ ಭಾನುವಾರ ಪತ್ತೆಯಾಗಿದೆ.

Advertisement

ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಚಿಕ್ಕೆಗೌಡನಹಳ್ಳಿ ಗ್ರಾಮದ ಸಮೀಪದ ಆಹಾರ ಅರಸಿ ಹಳ್ಳ ದಾಟುವ ವೇಳೆ ದುರ್ಘಟನೆ ನಡೆದಿದೆ.

ಕಳೆದ ೩ದಿನಗಳಿಂದ ಸುರಿಯುತ್ತೀರುವ ಧಾರಾಕಾರ ಮಳೆಯಿಂದ ಕೊರಟಗೆರೆ ಕ್ಷೇತ್ರದ ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ರಭಸವಾಗಿ ಹರಿಯುತ್ತಿವೆ. ಅಪಾಯದ ಮಟ್ಟಮೀರಿ ಹರಿಯುವ ನೀರಿನಲ್ಲೇ ಹಳ್ಳ ದಾಟಲು ಯತ್ನಿಸಿದ ಕರಡಿಯು ಈಜಲಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.

ಚಿಕ್ಕೆಗೌಡನಹಳ್ಳಿ ಗ್ರಾಮಸ್ಥರ ಮಾಹಿತಿಯ ಮೇರೆಗೆ ಕೊರಟಗೆರೆ ಅರಣ್ಯ ಇಲಾಖೆಯ ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿ ವರ್ಗ ಕರಡಿಯ ಮೃತದೇಹವನ್ನು ಸಿದ್ದರಬೆಟ್ಟದ ಅರಣ್ಯಕ್ಕೆ ರವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next