Advertisement

ಕೊರಕ್ಕೋಡು: ಪ್ರತಿಷ್ಠಾ ವಾರ್ಷಿಕೋತ್ಸವ, ಶ್ರೀ ದೈವಗಳ ನೇಮ

09:05 AM Apr 04, 2018 | Karthik A |

ಕಾಸರಗೋಡು: ಕೊರಕ್ಕೋಡು ತರವಾಡು ಕ್ಷೇತ್ರದ ಶ್ರೀ ಧೂಮಾವತಿ, ಶ್ರೀ ಕಲ್ಲಾಲ್ತ ಗುಳಿಗ, ಶ್ರೀ ಪಂಜುರ್ಲಿ, ಶ್ರೀ ಕಲ್ಲುರ್ಟಿ (ಸತ್ಯದೇವತೆ), ಶ್ರೀ ಕೊರತಿ ದೈವ ಹಾಗೂ ಶ್ರೀನಾಗ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮ ನೃತ್ಯಾದಿಗಳು ಎ. 5ರಿಂದ 8ರ ವರೆಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

Advertisement

ಎ. 5ರಂದು ಬೆಳಗ್ಗೆ 8ಕ್ಕೆ ಗಣಹೋಮ, 11ಕ್ಕೆ ನಾಗ ತಂಬಿಲ, ಮಧ್ಯಾಹ್ನ 12ಕ್ಕೆ ಶ್ರೀ ವೆಂಕಟ್ರಮಣ ದೇವರ ಮುಡಿಪು ಪೂಜೆ, 1ಕ್ಕೆ ಅನ್ನ ಪ್ರಸಾದ,  ಸಂಜೆ 6.30ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ರಾತ್ರಿ 9 ಕ್ಕೆ ಅನ್ನಪ್ರಸಾದ, ಎ.6ರಂದು ಅಪರಾಹ್ನ 12ಕ್ಕೆ ಗುಳಿಗ ತಂಬಿಲ, 1ಕ್ಕೆ ಅನ್ನ ಪ್ರಸಾದ, ಸಂಜೆ 6ಕ್ಕೆ ಭಂಡಾರ ಇಳಿಯುವುದು, ರಾತ್ರಿ 7ರಿಂದ ಶ್ರೀ ಗುಳಿಗನ ಕೋಲ, ಅನ್ನಪ್ರಸಾದ, 10ರಿಂದ ಶ್ರೀ ಪಂಜುರ್ಲಿ ಕಲ್ಲುರ್ಟಿ (ಸತ್ಯದೇವತೆ), ಕೋಲ, ಪ್ರಸಾದ ವಿತರಣೆ ನಡೆಯಲಿದೆ. ಎ. 7ರಂದು ಬೆಳಗ್ಗೆ  ಶ್ರೀ ಧೂಮಾವತಿ ದೈವದ ನೇಮ, ಮಧ್ಯಾಹ್ನ 1ರಿಂದ ಅನ್ನಪ್ರಸಾದ, ಸಂಜೆ 6ರಿಂದ ಶ್ರೀ ಕೊರತಿ ಅಮ್ಮನ ಕೋಲ, ಭಂಡಾರ ಏರುವುದು.
ಎ. 8ರಂದು ಮಧ್ಯಾಹ್ನ 12ಕ್ಕೆ ಗುಳಿಗ ತಂಬಿಲ, 1ಕ್ಕೆ ಅನ್ನಪ್ರಸಾದ, ರಾತ್ರಿ 7ರಿಂದ ಗುಳಿಗನ ಕೋಲ, ಕೊರತಿ ಅಮ್ಮನ ಕೋಲ, ಅನ್ನಪ್ರಸಾದ ವಿತರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next