Advertisement

Kannada Film; ʼಕೊರಗಜ್ಜʼ ನಿರ್ದೇಶಕರಿಗೆ ಕಾರ್‌ ಗಿಫ್ಟ್ ಮಾಡಿದ ನಿರ್ಮಾಪಕ

11:01 AM Sep 29, 2024 | Team Udayavani |

ತುಳುನಾಡಿನ ಕಾರಣಿಕ ಪುರುಷ “ಕೊರಗಜ್ಜ’ (Koragajja) ಕುರಿತಾಗಿ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಸಿನಿಮಾ ಮೂಡಿಬಂದಿರುವ ರೀತಿಗೆ ಫಿದಾ ಆದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರು ನಿರ್ದೇಶಕ ಸುಧೀರ್‌ ಅತ್ತಾವರ್‌ (Sudhir Attavar) ಅವರಿಗೆ ಕಿಯಾ ಕೇರನ್ಸ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಸಿನಿಮಾ ಮೇಲಿನ ಪ್ರೀತಿ ಪ್ರದರ್ಶಿಸಿದ್ದಾರೆ ತ್ರಿವಿಕ್ರಮ ಸಪಲ್ಯ.

Advertisement

ಚಿತ್ರದ ಕುರಿತು ಮಾತನಾಡುವ ತ್ರಿವಿಕ್ರಮ ಸಪಲ್ಯ, ನನ್ನ ತ್ರಿವಿಕ್ರಮ ಸಿನೆಮಾಸ್‌ ಬ್ಯಾನರ್‌ ಅಡಿಯಲ್ಲಿ ಈ ಮಟ್ಟದಲ್ಲಿ ಸಿನಿಮಾ ಒಂದು ಮೂಡಿ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. ಕೊರಗಜ್ಜ ಸಿನಿಮಾ ಎಲ್ಲಾ ಊಹೆಯನ್ನು ಮೀರಿ ಅದ್ಭುತ ರೀತಿಯಲ್ಲಿ ಮೂಡಿಬಂದಿದೆ. ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಶಿಷ್ಟ ಸಿನೆಮಾ ಆಗಿ ಮೂಡಿ ಬಂದಿದೆ. ನಿರ್ದೇಶಕರು ಸುಮಾರು ಒಂದುವರೆ ವರ್ಷಗಳ ಕಾಲ ತಯಾರಿ ಮಾಡಿ ಎಂಟು ನೂರು ವರ್ಷದ ಹಿಂದೆ ಬದುಕಿದ್ದ 23-24 ವರ್ಷ ಪ್ರಾಯದ ತನಿಯಾ ಎನ್ನುವ ಆದಿವಾಸಿ ಹುಡುಗ, ಮಹಾನ್‌ ಶಕ್ತಿ ಕೊರಗಜ್ಜ ಆಗಿ ಬೆಳಗುತ್ತಿರುವ ಬಗೆ ಹೇಗೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿಭಿನ್ನ ಈ ಸಿನಿಮಾವನ್ನು ಮಾಡಿದ್ದಾರೆ. ನೂರಾರು ಕಲಾವಿದರನ್ನು ಬಳಸಿಕೊಂಡು ಮೈನವಿನೇಳಿಸುವಂತೆ ಚಿತ್ರೀಕರಿಸಿದ್ದ ಯುದ್ಧ ಭೂಮಿಯಪರಿಕಲ್ಪನೆಯಂತೂ ಜಗತ್ತಿನ ಯಾವುದೇ ವಾರ್‌ ಸಿನೆಮಾ ಸೃಷ್ಟಿಸುವ ಸಂಚಲನವನ್ನು ಕೊರಗಜ್ಜ ಸಿನಿಮಾ ಸೃಷ್ಟಿಸಿದೆ’ ಎನ್ನುತ್ತಾರೆ.

ಚಿತ್ರದಲ್ಲಿ ಕಬೀರ್‌ ಬೇಡಿ, ಸಂದೀಪ್‌ ಸೋಪರ್ಕರ್‌, ಗಣೇಶ್‌ ಆಚಾರ್ಯ, ಶ್ರುತಿ, ಭವ್ಯ, ಋತಿಕಾ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಜೀತ್‌ ಜೊಸ್ಸಿ ಮತ್ತು ವಿದ್ಯಾಧರ್‌ ಶೆಟ್ಟಿ ಸಂಕಲನ, ಮನೋಜ್‌ ಪಿಳ್ಳೆ ಮತ್ತು ಪವನ್‌ ವಿ. ಛಾಯಾಗ್ರಹಣ, ಬಿಬಿನ್‌ ದೇವ್‌ ಸೌಂಡ್‌ ಡಿಸೈನಿಂಗ್‌ ಈ ಸಿನಿಮಾಕ್ಕಿದೆ. ಕೊರಗಜ್ಜ ಸಿನಿಮಾ ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next