Advertisement

ಕೊಪ್ಪಲಂಗಡಿ: ನಿಲ್ಲಿಸಿದ್ದ ಕಾರಿಗೆ ಮತ್ತೊಂದು ಕಾರು ಢಿಕ್ಕಿ

07:02 PM Dec 20, 2022 | Team Udayavani |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಮತ್ತೂಂದು ಕಾರು ಢಿಕ್ಕಿ ಹೊಡೆದು ಎರಡು ಕಾರುಗಳು ಜಖಂಗೊಂಡ ಘಟನೆ ರವಿವಾರ ಸಂಜೆ ನಡೆದಿದೆ.

Advertisement

ಮಲ್ಲಾರು ನಿವಾಸಿ ಶಾಹಿನ್‌ ಮೊಹಮ್ಮದ್‌ ರಫೀಕ್‌ ಅವರು ಕೊಪ್ಪಲಂಗಡಿ ಶ್ರೀರಾಮ್‌ ಕಾಂಪ್ಲೆಕ್ಸ್‌ ಬಳಿ ಮಾರುತಿ ಸ್ವಿಫ್ಟ್‌ ಕಾರು ನಿಲ್ಲಿಸಿ ದಿನಸಿ ಅಂಗಡಿಗೆ ತೆರಳಿದ್ದ ವೇಳೆ, ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬಲೆನೋ ಕಾರು ಢಿಕ್ಕಿ ಹೊಡೆದಿದೆ.

ಬಲೆನೋ ಕಾರಿನ ಮುಂದಿನ ಎಡಬದಿಯ ಚಕ್ರ ಸ್ಫೋಟಗೊಂಡು ಚಾಲಕ ಸುಪ್ರಸಾದ್‌ ಅವರ ನಿಯಂತ್ರಣ ತಪ್ಪಿ ಶಾಹೀನ್‌ ಅವರ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಮಾರುತಿ ಸ್ವಿಫ್ಟ್‌ ಕಾರಿನ ಹಿಂಭಾಗ ಜಖಂಗೊಂಡಿದ್ದು, ಬಲೆನೋ ಕಾರಿನ ಮುಂಭಾಗ ಜಖಂಗೊಂಡಿದೆ. ಢಿಕ್ಕಿ ಹೊಡೆದ ಕಾರಿನಲ್ಲಿದ್ದ ಸುಪ್ರಸಾದ್‌ ಅವರ ಪತ್ನಿ ಪಲ್ಲವಿ, ತಾಯಿ ಜಯ ಮತ್ತು ಚಿಕ್ಕ ಮಗುವಿಗೆ ಗಾಯಗಳಾಗಿದ್ದು, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಹೆದ್ದಾರಿ ಬದಿಯಲ್ಲಿದ್ದ ಜನರೇಟರ್‌ಗೆ ಢಿಕ್ಕಿ ಹೊಡೆದಿದ್ದರೆ ಭಾರೀ ಪ್ರಮಾಣದ ಅಪಾಯಗಳುಂಟಾಗುವ ಸಾಧ್ಯತೆಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next