Advertisement

Koppala; ಈಶ್ವರಪ್ಪಗೆ ಲೋಕಸಭಾ ಟಿಕೆಟ್ ನೀಡಲು ಕುರುಬ ಸಮಾಜದ ಒತ್ತಾಯ

11:47 AM Mar 15, 2024 | Team Udayavani |

ಕೊಪ್ಪಳ: ಕೆ ಎಸ್ ಈಶ್ವರಪ್ಪನವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಬೇಕು ಎಂದು ಕೊಪ್ಪಳದಲ್ಲಿ ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

Advertisement

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ ಮುಖಂಡರು, ಕುರುಬ ಸಮಾಜ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಲೋಕಸಭೆಗೆ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಏಳೆಂಟು ಕ್ಷೇತ್ರದಲ್ಲಿ ಕುರುಬ ಸಮಾಜದ ಮತಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ಒಂದು ವೇಳೆ ಈಶ್ವರಪ್ಪ ಅವರಿಗೆ ಟಿಕೆಟ್ ಕೊಡದಿದ್ದರೆ ಕುರುಬ ಸಮಾಜದ ಒಬ್ಬ ಸಾಮಾನ್ಯ ವ್ಯಕ್ತಿಗೆ ಟಿಕೆಟ್ ಕೊಡಲಿ ಎಂದರು.

ಬಿಜೆಪಿಯಲ್ಲಿ ಎಂಪಿಗೆ ಒಬ್ಬ ಕುರುಬ ಸಮಾಜದ ಯಾರಿಗಾದರೂ ಒಂದು ಟಿಕೆಟ್ ಕೊಡಲಿ. ಸಂವಿಧಾನದ ಆಶಯದಂತೆ ನಮ್ಮವರಿಗೆ ಟಿಕೆಟ್ ಕೊಡಲಿ. ಮುಂದಿನ ದಿನಗಳಲ್ಲಿ ಸಮಾಜಕ್ಕಾಗಿ ಹೋರಾಟ ಮಾಡಲಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ಮುಖಂಡ, ಬಿಜೆಪಿ ನಾಯಕ ಹನುಮಂತಪ್ಪ ಹನುಮಾಪೂರ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next