Advertisement

ಸಾರ್ವಜನಿಕ ಸ್ಥಳದಲ್ಲಿ ಯಾರೂ ಕುಳಿತುಕೊಳ್ಳದಂತೆ ಆಯಿಲ್ ಸುರಿದ ಯುವಕರು

09:32 AM Mar 29, 2020 | keerthan |

ಕೊಪ್ಪಳ: ಕೋವಿಡ್-19 ವೈರಸ್ ತಡೆಗಟ್ಟಲು ಕೊಪ್ಪಳ ಜಿಲ್ಲಾ ಲಾಕ್ ಡೌನ್ ಆಗಿದ್ದು ಈ ವೇಳೆ ಜನರು ಗಿಡದ ಕಟ್ಟೆಗಳ ಮೇಲೆ ಗುಂಪು ಗುಂಪಾಗಿ ಕುಳಿತುಕೊಳ್ಳಬಾರದು ಎಂದು ಯುವಕರು ಆಯಿಲ್ ಸುರಿದ ಘಟನೆ ಕಾರಟಗಿ ತಾಲೂಕಿನ ಸಿದ್ದಾಪೂರ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಯಾರೂ ಗುಂಪು ಗುಂಪಾಗಿ ಕುಳಿತುಕೊಳ್ಳದಂತೆ ನಿತ್ಯವೂ ಜಾಗೃತಿ ಮೂಡಿಸುತ್ತಿದ್ದರೂ ಜನ ಇದನ್ನು ನಿರ್ಲಕ್ಷಿಸಿದ್ದರು. ಇದರಿಂದ ಬೇಸತ್ತ ಗ್ರಾಮ ಪಂಚಾಯತ್ ಹಾಗೂ ಯುವಕರು ಸೇರಿಕೊಂಡು ಕಟ್ಟೆಗಳ ಮೇಲೆ ಕುಳಿತು ಮಾತನಾಡುವುದನ್ನು ತಪ್ಪಿಸಲು ಆಯಿಲ್ ಸುರಿಯುವ ಮೂಲಕ ಜನರು ಗುಂಪು ಕೂಡದಂತೆ ಮಾಡಿದ್ದಾರೆ.

ಕಟ್ಟೆಯ ಮೇಲೆ ಆಯಿಲ್ ಬಿದ್ದಿರುವುದನ್ನು ನೋಡುತ್ತಿರುವ ಜನತೆ ಗುಂಪು ಗುಂಪಾಗಿ ಕುಳಿತು ಮಾತನಾಡೋದನ್ನು ಕಡಿಮೆ ಮಾಡಿದ್ದಾರೆ. ಗ್ರಾಮ ಪಂಚಾಯತ್ ಹಾಗೂ ಕೆಲ ಯುವಕರ ಈ ಉಪಾಯ ಈಗ ಸಿದ್ದಾಪೂರದಲ್ಲಿ ಸ್ವಲ್ಪ ಕೆಲಸ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next