Advertisement

ಗವಿಸಿದ್ದೇಶ್ವರ ಜಾತ್ರೆಯಲ್ಲಿ ಅನುಭಾವದಮೃತ

11:43 AM Jan 14, 2019 | |

ಕೊಪ್ಪಳ: ನಾಡಿನ ಸುಪ್ರಸಿದ್ಧ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ವರ್ಷವೂ ಮಠದ ಆವರಣದಲ್ಲಿ ಸಾಂಪ್ರದಾಯಕ ಕ್ರೀಡೆಗಳು, ತೆಪ್ಪೋತ್ಸವ, ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ಹಲವು ಅನುಭಾವಿಗಳ ಅಮೃತ-ಚಿಂತನ ಗೋಷ್ಠಿಗಳು ನಡೆಯಲಿವೆ.

Advertisement

ಜಿಲ್ಲಾಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜ.18ರಂದು ಬೆಳಗ್ಗೆ 8:30ಕ್ಕೆ ಕೃಪಾದೃಷ್ಟಿ-ನೇತ್ರದಾನ ಜಾಗೃತಿ ಅಭಿಯಾನ ಜಾಥಾ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಬಸವ ಪಟ ಆರೋಹಣ ಕಾರ್ಯಕ್ರಮ, ಅಂದು ಸಂಜೆ ಮಠದ ಕೈಲಾಸ ಮಂಟಪದಲ್ಲಿ ಉಡಿ ತುಂಬುವ ಕಾರ್ಯಕ್ರಮ, ಜ.19ರಂದು ಸಂಜೆ 5ಕ್ಕೆ ತೆಪ್ಪೋತ್ಸವದಲ್ಲಿ ಗವಿಸಿದ್ಧೇಶ್ವರ ಮೂರ್ತಿಯ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.

ಗವಿಸಿದ್ಧೇಶ್ವರರ ಪಲ್ಲಕ್ಕಿ ಉತ್ಸವ: ಜ.20ರಂದು ಸಂಜೆ 5 ಕೊಪ್ಪಳದ ಜಡೆಗೌಡರ ಮನೆಯಿಂದ ಪೂಜಾ ಕಾರ್ಯ ನೆರವೇರಿಸಿದ ಬಳಿಕ ಹಲಗೇರಿಯಿಂದ ಮಹಾ ರಥೋತ್ಸವದ ಕಳಸ ಹಾಗೂ ಮುದ್ದಾಬಳ್ಳಿ ಗ್ರಾಮದಿಂದ ಶ್ರೀ ಗವಿಸಿದ್ದೇಶ್ವರರ ಬೆಳ್ಳಿ ಮೂರ್ತಿ ಮೆರವಣಿಗೆ ಅದ್ಧೂರಿಯಿಂದ ನಡೆಯಲಿದೆ. ಜ.21ರಂದು ಸಂಜೆ ಮಠದಲ್ಲಿ ಸಂಜೆ 5 ಗಂಟೆಗೆ ಲಘು ಉತ್ಸವ ನಡೆಯಲಿದೆ.

ರಥೋತ್ಸವ: ಜ.22ರಂದು ಬೆಳಗ್ಗೆ 10ಕ್ಕೆ ಮಠದ ಆವರಣದಲ್ಲಿ ಸಾಹಸ ಹಾಗೂ ದಾಲಪಟ ಪ್ರದರ್ಶನ, ಜಿಲ್ಲಾ ಕರಾಟೆ ಶಿಕ್ಷಕರ‌ ಸಂಘದ ಕರಾಟೆ ಪ್ರದರ್ಶನ ನಡೆಯಲಿದೆ. ಅಂದು ಸಂಜೆ 5:45ಕ್ಕೆ ಗವಿಸಿದ್ಧೇಶ್ವರರ ಮಹಾ ರಥೋತ್ಸವ ನಡೆಯಲಿದ್ದು, ಕೆನಡಾ ಮೂಲದ ದಂಪತಿ ಮ್ಯಾಥ್ಯೂ ಫೌರ್ಟಿಯರ್‌, ಅಗ್ಯಾಥ್‌್ಯ ಮೆಹ್‌್ಸ ಚಾಲನೆ ನೀಡಲಿದ್ದಾರೆ. ಗವಿಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ.

ಅನುಭಾವ ಚಿಂತನಾ ಗೋಷ್ಠಿ: ಜ.22ರ ಸಂಜೆ 6ಕ್ಕೆ ಅನುಭಾವಿಗಳ ಚಿಂತನಾ ಗೋಷ್ಠಿ ನಡೆಯಲಿದ್ದು, ರಾಮಕೃಷ್ಣ ಸೇವಾ ಆಶ್ರಮದ ಸ್ವಾಮಿ ಜಪಾನಂದ ಮಹರಾಜ, ನಿಡಸೋಸಿಯ ಚನ್ನಬಸವ ಸ್ವಾಮೀಜಿ, ಮುಚಳಾಂಬದ ಪ್ರಣವಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕ್ಯಾಪ್ಟನ್‌ ಗೋಪಿನಾಥ ಪಾಲ್ಗೊಳ್ಳಲಿದ್ದು, ಬಳಿಕ ಸಂಗೀತ ಕಾರ್ಯಕ್ರಮ ಜರುಗಲಿದೆ. ರಾತ್ರಿ ಗಂಗಾವತಿಯ ನರಸಿಂಹ ಜೋಶಿ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

Advertisement

ಭಕ್ತಹಿತಚಿಂತನ ಸಭೆ:ಜ.23ರಂದು ಬೆಳಗ್ಗೆ ಕಬಡ್ಡಿ ಪಂದ್ಯಾವಳಿ, ಸಂಜೆ 4ಗಂಟೆಗೆ ಶಿವಶಾಂತವೀರ ಶರಣರ ದೀರ್ಘ‌ದಂಡ ನಮಸ್ಕಾರ, ಸಿದ್ಧೇಶ್ವರರ ಮೂರ್ತಿ ಮೆರವಣಿಗೆ ನಡೆಯಲಿದೆ. ಸಂಜೆ 5:30ಕ್ಕೆ ಕೈಲಾಸ ಮಂಟಪದಲ್ಲಿ ಭಕ್ತ ಹಿತಚಿಂತನ ಸಭೆ ನಡೆಯಲಿದ್ದು, ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ, ಕರಿಬಸವ ಶಿವಾಚಾರ್ಯರು, ಪರಮ ರಾಮಾರೂಢ ಸ್ವಾಮೀಜಿ, ಅಮರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಟಿ.ಎಸ್‌. ನಾಗಾಭರಣ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಗೀತ, ನೆರಳು ಬೆಳಕು ಕಾರ್ಯಕ್ರಮ ನಡೆಯಲಿದೆ. ಜ.22 ಹಾಗೂ 23ರಂದು ರಾತ್ರಿ 10:30ಕ್ಕೆ ಕೈಲಾಸ ಮಂಟಪದಲ್ಲಿ ಗವಿಸಿದ್ಧೇಶ್ವರರ ಸೇವಾ ನಾಟ್ಯ ಸಂಘದಿಂದ ಶ್ರೀ ಗವಿಸಿದ್ಧೇಶ್ವರರ ಮಹಾತ್ಮ ನಾಟಕ ಪ್ರದರ್ಶನಗೊಳ್ಳಲಿದೆ.

ಜ.24ರಂದು ಬೆಳಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ನಾಡೋಜ ಡಾ| ಅನ್ನದಾನೇಶ್ವರ ಸ್ವಾಮೀಜಿ, ವಾಮದೇವ ಶಿವಾಚಾರ್ಯರು, ಚಿದಾನಂದ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ರಾಷ್ಟ್ರೀಯ ಜಲಪುರುಷ ಡಾ| ರಾಜೇಂದ್ರ ಸಿಂಗ್‌ ಸಮಾರೋಪ ನುಡಿಯನ್ನಾಡಲಿದ್ದಾರೆ. ಬಳಿಕ ಭಾವತರಂಗ, ವಿಸ್ಮಯ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next