Advertisement

ರಾಜಕಾರಣಿ ಮೀರಿಸುತ್ತಿದ್ದಾರೆ ನೌಕರರು

03:59 PM Jun 13, 2019 | Naveen |

ದತ್ತು ಕಮ್ಮಾರ
ಕೊಪ್ಪಳ:
ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ 62 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಭರ್ಜರಿಯಾಗಿ ನಡೆದಿದ್ದು, ವಿವಿಧ ಇಲಾಖೆಗಳಲ್ಲಿ ಈಗಾಗಲೇ ಕೆಲವು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಆದರೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಐದು ನಿರ್ದೇಶಕರ ಸ್ಥಾನಗಳ ಚುನಾವಣೆ ರಾಜಕೀಯವನ್ನೂ ಮೀರಿಸುವಂತಿದೆ.

Advertisement

ಜಿಲ್ಲೆಯಲ್ಲಿ ಸರ್ಕಾರಿ ನೌಕರರಲ್ಲಿ ಬರಿ ಚುನಾವಣೆಯದ್ದೇ ಮಾತಾಗಿದೆ. ಅವರು ಆ ಬಣ, ಇವರು ಈ ಬಣ ಎನ್ನುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷಾರಂಭದಲ್ಲೇ ಸಂಘಕ್ಕೆ ಚುನಾವಣೆ ಘೋಷಣೆಯಾಗಿದ್ದರಿಂದ ಎಲ್ಲರೂ ಸಂಘದ ನಿರ್ದೇಶಕ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರೆ.

ಜಿಲ್ಲಾ ಸಂಘಕ್ಕೆ 62 ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ಮಾಡಬೇಕಿದ್ದು, ಈಗಾಗಲೆ ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಹಂಚಿಕೆಯಾದ ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ. ಪ್ರಮುಖವಾಗಿ ಪ್ರಾಥಮಿಕ ಶಾಲಾ ವಿಭಾಗಕ್ಕೆ 5 ಸ್ಥಾನಗಳು ಹಂಚಿಕೆಯಾಗಿದ್ದು, ಅವರ ಆರ್ಭಟ ಜಿಲ್ಲೆಯಾದ್ಯಂತ ಸದ್ದು ಮಾಡಿದೆ. ಕೊಪ್ಪಳ ತಾಲೂಕಿನಲ್ಲಿಯೇ 1,276 ಪ್ರಾಥಮಿಕ ಶಾಲಾ ಶಿಕ್ಷಕರು ಮತದಾನ ಹಕ್ಕು ಪಡೆದಿದ್ದಾರೆ. ನಗರದ ಎಂಎಚ್ಪಿಎಸ್‌ ಶಾಲೆ ಆವರಣದಲ್ಲಿ ಜೂ.13ಕ್ಕೆ ಮತದಾನ ನಡೆಯಲಿದೆ.

ಮತದಾನಕ್ಕೂ ಮುನ್ನಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಭರ್ಜರಿ ಪ್ರಚಾರ ನಡೆದಿದ್ದು, ತಾಲೂಕಿನಾದ್ಯಂತ ಇರುವ ಸರ್ಕಾರಿ ಶಾಲೆಗಳಿಗೆ ತೆರಳಿ ಮತ ನೀಡುವಂತೆ ಮನವಿ ಮಾಡಿ ತಮ್ಮ ಗೆಲುವಿಗೆ ಸಹಕರಿಸುವಂತೆ ಓಲೈಕೆಯ ಮಾತನ್ನಾಡಿದ್ದಾರೆ. ವಿಶೇಷವೆಂಬಂತೆ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಶಂಭುಲಿಂಗನಗೌಡ ಪಾಟೀಲರು ಮತ್ತೆ ಕಾರ್ಯಕಾರಿ ಸಮಿತಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಇವರದ್ದೇ ಒಂದು ಬಣವಿದೆ. ಇನ್ನು ಇವರ ಬಣದಲ್ಲಿ ಇತರೆ ನಾಲ್ವರು ಹುರಿಯಾಳುಗಳಾಗಿ ಕಣದಲ್ಲಿದ್ದಾರೆ.

ಇನ್ನು ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಅವರದ್ದು ಮತ್ತೂಂದು ಬಣವಿದ್ದು ಅವರಲ್ಲೂ ಐವರು ಸ್ಪರ್ಧೆಗೆ ನಿಂತಿದ್ದಾರೆ. ಒಟ್ಟು ಪ್ರಾಥಮಿಕ ಶಾಲಾ ವಿಭಾಗಕ್ಕೆ 5 ಸ್ಥಾನಗಳಿಗೆ ಎರಡು ಬಣಗಳಿಂದ 10 ಜನರು ಸ್ಪರ್ಧಿಸಿದ್ದಾರೆ.

Advertisement

ಈ ಮೊದಲು ಸರ್ಕಾರಿ ನೌಕರರ ಸಂಘದ ಚುನಾವಣೆ ಅಷ್ಟೊಂದು ರಾಜಕೀಯ ರಂಗು ಪಡೆಯುತ್ತಿರಲಿಲ್ಲ. ಆದರೆ ಇತ್ತೀಚೆಗೆ ನೌಕರ ಸಂಘದಲ್ಲೂ ರಾಜಕೀಯ ಬೆರೆತ ಹಿನ್ನೆಲೆಯಲ್ಲಿ ಇಲ್ಲೂ ಅವರದ್ದೇ ಬಣಗಳನ್ನು ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿವೆ.

ಒಟ್ಟಿನಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ನಡೆದಿರುವ ಚುನಾವಣೆ ಎಂಎಲ್ಎ, ಎಂಪಿ ಚುನಾವಣೆಯನ್ನೂ ನಾಚಿಸುವಂತಿದೆ. ಸೋಸಿಯಲ್ ಮೀಡಿಯಾ ಸೇರಿದಂತೆ ಕರಪತ್ರ, ಬ್ಯಾನರ್‌ಗಳ ಅಬ್ಬರಕ್ಕೆ ಭರವಿಲ್ಲ.

ಸರ್ಕಾರಿ ನೌಕರರಿಗೆ ಸೇವೆ ಮಾಡಬೇಕೆಂಬ ಉದ್ದೇಶದಿಂದ ಕಾರ್ಯಕಾರಿ ಸಮಿತಿಗೆ ನಾವು ಸ್ಪರ್ಧಿಸಿದ್ದೇವೆ. ನಮ್ಮ ತಂಡದಿಂದ ಐವರು ಸ್ಪರ್ಧಿಸಿದ್ದಾರೆ. ನಮ್ಮ ತಾಲೂಕಿನಲ್ಲಿ 1276 ಮತದಾರರಿದ್ದಾರೆ. ಎಲ್ಲ ಶಾಲೆಗಳಿಗೆ ತೆರಳಿ ಮತಯಾಚಿಸಿದ್ದೇವೆ.
ಬೀರಪ್ಪ ಅಂಡಗಿ,
ಪ್ರಾಥಮಿಕ ಶಾಲಾ ವಿಭಾಗದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next