Advertisement

Koppal: ಮೃತ ಪಿಎಸ್ಐ ಪರಶುರಾಮ ಅಂತಿಮ ದರ್ಶನ ಪಡೆದ ಸಚಿವ ತಂಗಡಗಿ

09:55 PM Aug 03, 2024 | Team Udayavani |

ಕೊಪ್ಪಳ:  ಮೃತ ಯಾದಗಿರಿ ಪಿಎಸ್ಐ ಪರಶುರಾಮ ಚಲವಾದಿ(35) ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ವ್ಯವಸ್ಥೆ ಮಾಡಿದೆ.

Advertisement

ಯಾದಗಿರಿ ನಗರ ಠಾಣೆ ಪಿಎಸ್ಐ ಪರಶುರಾಮ ಛಲವಾದಿ ಮೃತದೇಹ ಅಂಬುಲೆನ್ಸ್ ಮೂಲಕ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆಗೊಳಿಸಲಾಗಿತ್ತು.  ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಮೃತ ಪೊಲೀಸ್ ಅಧಿಕಾರಿ ಪರಶುರಾಮ ಅಂತಿಮ ದರ್ಶನ ಪಡೆದು ಸರ್ಕಾರಿ ಗೌರವ ಸಲ್ಲಿಸಿದರು.

ಅಂತಿಮ ದರ್ಶನದ ವೇಳೆ ಮಾಜಿ ಶಾಸಕ ಬಸವರಾಜ ದಡೆಸಗೂರು, ಐಜಿಪಿ ಸೇರಿ ಅಧಿಕಾರಿ ವರ್ಗದವರು ಅಂತಿಮ ದರ್ಶನ ಪಡೆದರು.  ಗ್ರಾಮಸ್ಥರು ಮೃತ‌ ಪೊಲೀಸ್ ಅಧಿಕಾರಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next