Advertisement

Koppal: ಕಡೇಕೊಪ್ಪ ಬಳಿ ಬೈಕ್ ಅಪಘಾತ: ಇಬ್ಬರು ಮೃತ್ಯು

05:53 PM Jul 14, 2024 | Team Udayavani |

ದೋಟಿಹಾಳ (ಕೊಪ್ಪಳ ಜಿಲ್ಲೆ) : ಸಮೀಪದ ಕಡೇಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ದೋಟಿಹಾಳ  ಹನಮಸಾಗರ ರಸ್ತೆಯ ಸೇತುವೆ ಮೇಲೆ ಭೀಕರ ಬೈಕ್ ಅಪಘಾತ ಸಂಭವಿಸಿ ಸ್ಥಳದಲ್ಲೇ ಮಹಿಳೆ ಹಾಗೂ ಯುವಕ  ದುರ್ಮರಣಕ್ಕೀಡಾದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

Advertisement

ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಷ್ಟಗಿ ಇಳಕಲ್ ಮಾರ್ಗದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರು ಕಡೇಕೊಪ್ಪ ತಾಂಡದ ನಿವಾಸಿ ರುಕ್ಮಿಣಿ ಗಂ. ರಂಜಿತ್ ಸಿಂಗ್  (42) ಮತ್ತು ವಿಜಯ (21) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಇಳಕಲ್ ಕಡೆಗೆ ಬೈಕ್ ಮೂಲಕ ಸವಾರಿ ಮಾಡಿಕೊಂಡು ಹೋಗುತಿದ್ದ ಸಂದರ್ಭದಲ್ಲಿ ವಾಹನವೊಂದು ತಾಗಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್’ಐ ಮುದ್ದುರಂಗಸ್ವಾಮಿ ಹಾಗೂ ಹೆದ್ದಾರಿ ಗಸ್ತು ವಾಹನ  ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next