Advertisement

Koppal: ಕ್ರೀಡಾಕೂಟ ವೀಕ್ಷಿಸುತ್ತಿದ್ದ 28 ರ ಹರೆಯದ ಗ್ರಾಪಂ ಸಿಬಂದಿ ಕುಸಿದು ಬಿದ್ದು ಮೃತ್ಯು

02:10 PM Feb 04, 2024 | |

ಕೊಪ್ಪಳ: ಕ್ರೀಡಾಕೂಟ ನೋಡಲು ಬಂದಿದ್ದ ಗ್ರಾಪಂ ಸಿಬಂದಿಯೊಬ್ಬರು ಕುಸಿದು ಬಿದ್ದು ಮೃತ ಪಟ್ಟಿರುವ ಘಟನೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದೆ.

Advertisement

ಆರ್.ಡಿ.ಪಿ.ಆರ್ ಇಲಾಖೆ ಕ್ರೀಡಾಕೂಟದ ಎರಡನೇ ದಿನ ಯಲಬುಲರ್ಗಾ ತಾಲೂಕಿನ ಮುಧೋಳ ಗ್ರಾಪಂ ಕಂಪ್ಯೂಟರ್ ಆಪರೇಟರ್ ವಿನೋದ ಕರಿಸಿದ್ದಪ್ಪ ಮ್ಯಾಗೇರಿ (28) ಮೃತ ಪಟ್ಟಿದ್ದಾರೆ.

ಕ್ರೀಡಾಕೂಟವನ್ನು ವೀಕ್ಷಿಸುತ್ತಿದ್ದ ವೇಳೆ ಏಕಾಏಕಿ ಅಸ್ವಸ್ಥಗೊಂಡ ವಿನೋದ್ ಅವರನ್ನು ಸ್ಥಳದಲ್ಲಿದ್ದ ಅಂಬುಲೆನ್ಸ್ ಬಳಿ ಕರೆದೊಯ್ಯುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ರದ್ದುಗೊಳಿಸಿ, ಮೌನಾಚರಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next