Advertisement

ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮ

05:48 PM Apr 19, 2020 | Naveen |

ಕೂಡ್ಲಿಗಿ: ಪಟ್ಟಣದ ವರ್ತಕರು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ಮಾರಾಟ ಮಾಡುವುದನ್ನು ಬಿಡಬೇಕು. ಇಲ್ಲವಾದರೆ ಕಿರಾಣಿ ಅಂಗಡಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್‌ ಹೇಳಿದರು.

Advertisement

ತಾಲೂಕು ಆಡಳಿತ ಕಚೇರಿಯಲ್ಲಿ ತಾಲೂಕು ಕಿರಾಣಿ ವರ್ತಕರ ಸಂಘದ ಸಭೆಯಲ್ಲಿ ಮಾತನಾಡಿ, ಕಿರಾಣಿ ಮಾಲೀಕರು ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಅಂಗಡಿ ಮಾಲೀಕರು ಅಂಗಡಿಗಳ ಮುಂದೆ ದರಪಟ್ಟಿಯನ್ನು ನೇತು ಹಾಕಿ ಗ್ರಾಮದಿಂದ ಬಂದಂತಹ ಜನರು ಗಮನಿಸಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಹಾಗೆಯೇ ಅಂಗಡಿಯವರು ಗುಟ್ಕಾ ಮಾರಾಟ ನಿಷೇಧ ಮಾಡಬೇಕು ಎಂದರು.

ಇಓ ಬಸಣ್ಣ, ಶಾಸಕರ ಆಪ್ತ ಸಹಾಯಕ ಶೀಕಾಂತ, ಸ. ನೌಕರರ ಸಂಘದ ಅಧ್ಯಕ್ಷ ಶಿವರಾಜ್‌ ಪಾಲ್ತೂರ್‌, ಸಿಪಿಐ ಪಂಪನಗೌಡ, ಪಿಎಸೈ ತಿಮ್ಮಣ್ಣ. ಎಸ್‌. ಚಾಗನೂರ್‌, ಉಪತಹಶೀಲ್ದಾರ್‌ ಉಮೇಶ ರಾಥೋಡ್‌, ನವೀನಕುಮಾರ ಕಂದಾಯ ನೀರಿಕ್ಷಕ ಹಾಗೂ ಪಟ್ಟಣದ ಕಿರಾಣಿ ವರ್ತಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next