Advertisement

Konkan Railway; ಗುಡ್ಡ ಕುಸಿತದಿಂದಾಗಿ ಸೇವೆ ವ್ಯತ್ಯಯ

12:39 AM Jul 16, 2024 | Team Udayavani |

ಮುಂಬಯಿ: ಮಹಾರಾಷ್ಟ್ರದ ರಾಯಗಢ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ರವಿವಾರ ಸಂಜೆ ಭಾರೀ ಮಳೆಯ ನಡುವೆ ಭೂಕುಸಿತದಿಂದಾಗಿ ಕೊಂಕಣ ರೈಲು ಮಾರ್ಗದಲ್ಲಿ ರೈಲು ಸೇವೆಗಳು ಸ್ಥಗಿತಗೊಂಡಿವೆ.

Advertisement

ಸಂಜೆ 5 ಗಂಟೆ ಸುಮಾರಿಗೆ ವಿನ್ಹೆರೆ (ರಾಯಗಢ) ಮತ್ತು ದಿವಾನ್‌ ಖವಾಟಿ (ರತ್ನಾಗಿರಿ) ನಿಲ್ದಾಣಗಳ ನಡುವಿನ ಸುರಂಗದ ಹೊರಗೆ ಭೂಕುಸಿತ ಸಂಭವಿಸಿದೆ ಎಂದು ವಕ್ತಾರರು ಕೊಂಕಣ ರೈಲ್ವೇ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಮಂಗಳೂರು ಎಕ್ಸ್‌ಪ್ರೆಸ್‌, ಕೊಂಕಣ ಕನ್ಯಾ ಎಕ್ಸ್‌ಪ್ರೆಸ್‌, ತುಟಾರಿ ಎಕ್ಸ್‌ಪ್ರೆಸ್‌, ಜನಶತಾಬ್ಧಿ ಎಕ್ಸ್‌ಪ್ರೆಸ್‌, ದಿವಾ ಸಾವಂತವಾಡಿ ಎಕ್ಸ್‌ಪ್ರೆಸ್‌, ಸಾವಂತವಾಡಿ ಮಡಗಾಂವ್‌ ಪ್ಯಾಸೆಂಜರ್‌ ರೈಲು ಸೇವೆ ನಿಂತಿದೆ. ಇನ್ನು ಕರಾವಳಿ ಭಾಗದ 12134 ಸೂಪರ್‌ಎಕ್ಸ್‌ಪ್ರೆಸ್‌ ಛತ್ರಪತಿ ಶಿವಾಜಿ ಮುಂಬಯಿ ಟರ್ಮಿನಲ್‌ ರೈಲು ರದ್ದಾಗಿದೆ. 12620 ಮತ್ಸ್ಯಗಂಧಾ ಮಂಗಳೂರು ಟು ಮುಂಬಯಿ ರೈಲು ರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next