Advertisement

ದುರಸ್ತಿ ಭಾಗ್ಯ ಕಾಣದ ಕೋಣಿ- ಕೋಟೇಶ್ವರ ರಸ್ತೆ : ಅಲ್ಲಲ್ಲಿ ಹೊಂಡ- ಗುಂಡಿ

07:07 PM Mar 28, 2021 | Team Udayavani |

ಬಸ್ರೂರು : ಕುಂದಾಪುರ – ತೀರ್ಥಹಳ್ಳಿ ಹೆದ್ದಾರಿಯ ಕೋಣಿ ಬಳಿಯಿಂದ ಕೋಟೇಶ್ವರಕ್ಕೆ ಸಂಚರಿಸುವ ಒಳ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿದ್ದು, ಇನ್ನೂ ದುರಸ್ತಿಗೆ ಕಾಲ ಕೂಡ ಬಂದಿಲ್ಲ. ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಹೊಂಡ- ಗುಂಡಿಗಳಿದ್ದು, ಸಂಚಾರ ದುಸ್ತರವಾಗಿದೆ.

Advertisement

ಈ ಕೋಣಿ – ಕೋಟೇಶ್ವರ ಸಂಪರ್ಕ ರಸ್ತೆ ಕಿರಿದಾಗಿದ್ದು, ಈ ರಸ್ತೆಯಲ್ಲಿ ಉದ್ದಕ್ಕೂ ಹೊಂಡಗಳೇ ತುಂಬಿದ್ದು ಎದುರಿನಿಂದ ಬೇರೊಂದು ವಾಹನ ಬಂದರೆ ಎಡಕ್ಕೆ ತಿರುಗಿಸಿದರೆ ಇಲ್ಲಿ ಚರಂಡಿಗೆ ಬೀಳುವ ಸಾಧ್ಯತೆ ಇದೆ.

ಈ ರಸ್ತೆಯ ಆರಂಭದಲ್ಲಿ ಸುಮಾರು 150 ಮೀ.ಗಳಷ್ಟೆ ಕೋಣಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲಿಂದ ಹಂಗಳೂರು ಗ್ರಾ.ಪಂ. ವ್ಯಾಪ್ತಿ ಆರಂಭ ವಾಗುತ್ತದೆ. ಇಲ್ಲೂ ರಸ್ತೆ ತುಂಬಾ ಹೊಂಡಗಳೇ ತುಂಬಿವೆ. ಈ ರಸ್ತೆಯಲ್ಲಿ ಮುಂದೆ ಹೋದರೆ ಕೋಟೇಶ್ವರ ವ್ಯಾಪ್ತಿ ಆರಂಭವಾಗುತ್ತದೆ.

ಇದನ್ನೂ ಓದಿ :ಚೀನಾ ಸೇನೆಗೆ ಭಾರತ ತಕ್ಕ ಪಾಠ ಕಲಿಸಿದೆ: ಸಂಸದ ತೇಜಸ್ವಿ ಸೂರ್ಯ

ಇದು ಕುಂದಾಪುರ – ತೀರ್ಥಹಳ್ಳಿ ಹೆದ್ದಾರಿಯಿಂದ ಕೋಟೇಶ್ವರ – ಹಾಲಾಡಿ ಜಿಲ್ಲಾ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ.ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಕೋಣಿ – ಕೋಟೇಶ್ವರ ಸಂಪರ್ಕ ರಸ್ತೆಗೆ ದುರಸ್ತಿ ಭಾಗ್ಯ ಬಂದಿಲ್ಲ. ಈ ರಸ್ತೆಯಲ್ಲಿ ಕುಂದಾಪುರಕ್ಕೆ ಹೋಗದೆ ಕೋಟೇಶ್ವರ ಮತ್ತಿತರ ಪ್ರದೇಶಗಳಿಗೆ ಹೋಗಬಹುದಾಗಿದೆ.

Advertisement

ವಿಶೇಷವೆಂದರೆ ಕುಂದಾಪುರ ಅಗ್ನಿಶಾಮಕ ಠಾಣೆಯಿರುವುದೂ ಈ ಕೋಣಿಯ ಇಕ್ಕಟ್ಟಿನ ರಸ್ತೆಗಳ ಮಧ್ಯೆ. ತುರ್ತಾಗಿ ಸಾಗಬೇಕಾದರೆ ಎದುರಿನಿಂದ ಯಾವ ವಾಹನವೂ ಬರಬಾರದು. ದ್ವಿಚಕ್ರ ವಾಹನ ಸವಾರರು ಸೇರಿದಂತೆ ಯಾವುದೇ ವಾಹನವೂ ಈ ರಸ್ತೆಯಲ್ಲಿ ಸರಾಗವಾಗಿ ಸಾಗುವಂತಿಲ್ಲ. ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next