Advertisement

ಕೋವಿಡ್ ಹಿನ್ನೆಲೆ : ಕೊಂಗಳ್ಳಿ ಬೆಟ್ಟಕ್ಕೆ ನ. 4ರಿಂದ 18ರವರೆಗೆ ಪ್ರವೇಶ ನಿರ್ಬಂಧ

07:40 PM Nov 02, 2021 | Team Udayavani |

ಚಾಮರಾಜನಗರ : ರಾಜ್ಯದ ಗಡಿಯಲ್ಲಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಪ್ರಸಿದ್ಧ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ಕೋವಿಡ್ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Advertisement

ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಈ ಆದೇಶ ಹೊರಡಿಸಿದೆ. ನ. 4ರಿಂದ 18ರವರೆಗೆ ದೇವಾಲಯಕ್ಕೆ ಪ್ರವೇಶ ಇಲ್ಲ. ಅಲ್ಲದೇ ಭಕ್ತಾದಿಗಳು ಕೊಂಗಳ್ಳಿ ಗ್ರಾಮದಲ್ಲಿ ತಂಗಲು ಸಹ ಅವಕಾಶ ಇಲ್ಲ ಎಂದು ದೇವಾಲಯದ ಇಓ ಭರಣಿಧರನ್ ಹಾಗೂ ಗುಮಾಸ್ತರಾದ ಮಲ್ಲಾರಾಧ್ಯ ತಿಳಿಸಿದ್ದಾರೆ.

ಕೊಂಗಳ್ಳಿ ಬೆಟ್ಟಕ್ಕೆ ಕರ್ನಾಟಕದಿಂದ ಹೆಚ್ಚು ಭಕ್ತಾದಿಗಳು ತೆರಳುತ್ತಾರೆ. ಹೀಗಾಗಿ ಕರ್ನಾಟಕದ ಭಕ್ತಾದಿಗಳು ಈ ಸೂಚನೆಯನ್ನು ಗಮನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಜ್ ಯಾತ್ರೆಗೆ ಮತ್ತೆ ಚಾಲನೆ : ನೋಂದಣಿ ಪ್ರಕ್ರಿಯೆ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next