Advertisement

Kollur: ಆನ್‌ಲೈನ್‌ ಮೂಲಕ ಹಣ ವರ್ಗಾವಣೆ; ದೂರು

01:15 AM Mar 20, 2024 | Team Udayavani |

ಕೊಲ್ಲೂರು: ಪ್ರಧಾನ ಮಂತ್ರಿ ಜನಧನ್‌ ಯೋಜನೆಯಡಿ ಸಾಲ ಕೊಡಿಸುವುದಾಗಿ ಫೇಸ್‌ಬುಕ್‌ನಲ್ಲಿ ಹಾಕಿದ ಜಾಹೀರಾತು ನೋಡಿದ ಶ್ರೀಕಾಂತ್‌ ಅವರು ಜಾಹೀರಾತಿನಲ್ಲಿದ್ದ ಮೊಬೈಲಿಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ ಅವರಿಂದ ಸಂಬಂಧಪಟ್ಟ ದಾಖಲೆ ಪಡೆದು ಸಾಲದ ಪತ್ರಗಳು ಹಾಗೂ ಬ್ಯಾಂಕಿನ ದಾಖಲಾತಿಗಳನ್ನು ಮೊಬೈಲ್‌ ಮೂಲಕ ಕಳುಹಿಸಿಕೊಟ್ಟಿದ್ದರು.

Advertisement

ಅಪರಿಚಿತ ವ್ಯಕ್ತಿ ಹೇಳಿದಂತೆ ಶ್ರೀಕಾಂತ್‌ 1,04,354 ರೂ. ಮೊತ್ತವನ್ನು ಹಾಕಿದ ಬಳಿಕ ಇನ್ನಷ್ಟು ಹಣ ಹಾಕಲು ಹೇಳಿದಾಗ ಅನುಮಾನಗೊಂಡ ದೂರುದಾರರು ಬ್ಯಾಂಕಿನಲ್ಲಿ ವಿಚಾರಿಸಿದಾಗ ಮೋಸ ಮಾಡಿರುವುದು ತಿಳಿಯಿತು.

ಆರೋಪಿಯು ಅಕ್ರಮವಾಗಿ ಆನ್‌ಲೈನ್‌ ಮೂಲಕ ಹಣ ವರ್ಗಾಯಿಸಿ ವಂಚನೆ ಮಾಡಿರುವ ಬಗ್ಗೆ ಕೊಲ್ಲೂರು ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next