Advertisement

Kolkata; ವೈದ್ಯೆ ರೇಪ್‌ ಮೊದಲು ಗೆಳತಿ ಬೆತ್ತಲೆ ಫೋಟೊ ವೀಕ್ಷಿಸಿದ್ದ!!

01:06 AM Aug 27, 2024 | Team Udayavani |

ಹೊಸದಿಲ್ಲಿ: ಕೋಲ್ಕತಾ ಟ್ರೈನಿ ವೈದ್ಯೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವುದಾಗಿ ಆರೋಪಿ ಸಂಜಯ್‌ ರಾಯ್‌ ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಒಪ್ಪಿಕೊಂಡಿ ರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ.

Advertisement

ವೈದ್ಯೆಯ ಕೊಲೆ ನಡೆಸುವ ಮುಂಚೆ ಸಂಜಯ್‌ ತನ್ನ ಸ್ನೇಹಿತನ ಜತೆಗೂಡಿ ಕೋಲ್ಕತಾದ 2 ರೆಡ್‌ಲೈಟ್‌ ಪ್ರದೇಶಗಳಿಗೆ ಭೇಟಿ ನೀಡಿದ್ದ. ಆದರೆ ಸೆಕ್ಸ್‌ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

ಮೊದಲು ಸೋನಾಗಚಿ ರೆಡ್‌ಲೈಟ್‌ಗೆ ಸ್ನೇಹಿತನ ಜತೆಗೂಡಿ ಹೋದೆ. ಆದರೆ ಅಲ್ಲಿ ಯಾವುದೇ ಉಪಯೋಗವಾಗದ್ದರಿಂದ ಬಳಿಕ ಮತ್ತೂಂದು ರೆಡ್‌ ಲೈಟ್‌ ಏರಿಯಾ ಚೆಟ್ಲಾಗೆ ಹೋದೆವು. ಅಲ್ಲಿಗೆ ಹೋಗು ವಾಗ ದಾರಿ ಮಧ್ಯೆ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದೆವು. ಚೆಟ್ಲಾದಲ್ಲಿ ನನ್ನ ಸ್ನೇಹಿತ ಸೆಕ್ಸ್‌ ಮಾಡಿದ. ಈ ವೇಳೆ ನಾನು, ನನ್ನ ಗೆಳತಿಗೆ ವೀಡಿಯೋ ಕಾಲ್‌ ಮಾಡಿ, ಬೆತ್ತಲೆ ಫೋಟೋ ಕಳುಹಿಸುವಂತೆ ಕೇಳಿದೆ. ಅವಳು ತನ್ನ ಬೆತ್ತಲೆ ಫೋಟೋ ಕಳುಹಿಸಿದಳು. ಬಳಿಕ ಅಲ್ಲಿಂದ ನೇರವಾಗಿ ಆರ್‌ಜಿ ಕಾರ್‌ ಆಸ್ಪತ್ರೆಗೆ ಬಂದೆವು. ನಾನು ನೇರವಾಗಿ 4ನೇ ಅಂತಸ್ತಿಗೆ ಹೋದೆ. ಅಲ್ಲಿನ ಸೆಮಿನಾರ್‌ ಹಾಲ್‌ನಲ್ಲಿ ಮಲಗಿದ್ದ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಸೀದಾ ಸ್ನೇಹಿತ ಎಎಸ್‌ಐ ಮನೆಗೆ ಹೋದೆ ಎಂದು ಆರೋಪಿ ಸಂಜಯ್‌ ಹೇಳಿದ್ದಾನೆ. ಆರೋಪಿ ಹೇಳಿದ ವಿಷಯಗಳು ಅಷ್ಟೂ ದೃಢಪಟ್ಟಿವೆ ಎನ್ನಲಾಗಿದೆ. ಹಾಗಿದ್ದೂ, ಅನೇಕ ವಿಷಯಗಳಲ್ಲಿ ಆತ ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ. ಈತನ ಮೊಬೈಲ್‌ನಲ್ಲಿ ಸಾಕಷ್ಟು ಅಶ್ಲೀಲ ವೀಡಿಯೋಗಳ ಚಿತ್ರಿಕೆಗಳಿದ್ದವು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಮಾಜಿ ಪ್ರಿನ್ಸಿಪಾಲ್‌ಗೆ 2ನೇ ದಿನ ಸುಳ್ಳು ಪತ್ತೆ ಪರೀಕ್ಷೆ
ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಮತ್ತು ಇತರೆ 5 ಆರೋಪಿಗಳ ಮೇಲೆ 2ನೇ ಹಂತದ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗಿದೆ. ತನಿಖೆ ಯಲ್ಲಿ ಘೋಷ್‌ ಅಸಮಂಜಸ ಉತ್ತರಗಳನ್ನು ನೀಡುತ್ತಿ ರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೂಂದು ಸುತ್ತಿನ ಸುಳ್ಳು ಪತ್ತೆ ಪರೀಕ್ಷೆ ನಡೆಸು ತ್ತಿದ್ದಾರೆ. ಅತ್ಯಾಚಾರದ ತನಿಖೆಯೊಂದಿಗೆ ಆಸ್ಪತ್ರೆ ಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳ ಕುರಿತು ಕೂಡ ತನಿಖೆ ನಡೆಸುತ್ತಿದೆ.

ಬಂಗಾಲದಲ್ಲಿ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಶುರು ಏಕಿಲ್ಲ?: ಕೇಂದ್ರ
ಪಶ್ಚಿಮ ಬಂಗಾಲದಲ್ಲಿ ಅತ್ಯಾಚಾರ ಸೇರಿ ಮಹಿಳೆಯರ ವಿರುದ್ಧದ ಪ್ರಕರಣಗಳ ತನಿಖೆಗೆ ತ್ವರಿತ ಗತಿ ಕೋರ್ಟ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡ ಲಾಗಿ ದ್ದರೂ, ಏಕೆ ಆರಂಭಿ ಸ ಲಾಗಿಲ್ಲ ಎಂದು ಕೇಂದ್ರ ಸರಕಾರ ಪ್ರಶ್ನಿಸಿದೆ. ಟ್ರೈನಿ ವೈದ್ಯೆ ಮೇಲೆ ಅತ್ಯಾ ಚಾರ, ರೇಪ್‌ ನಡೆದಿದ್ದ ಪ್ರಕರಣ ಖಂಡಿಸಿ ಕಠಿನ ಕಾನೂನು ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಮಮತಾ ಬ್ಯಾನರ್ಜಿಗೆ ಉತ್ತರಿಸಿದ ಕೇಂದ್ರ ಸಚಿವೆ ಅನ್ನಪೂರ್ಣಾ ದೇವಿ, ಮಹಿಳೆಯರ ಸಹಾಯವಾಣಿ ಆರಂಭಿಸುವಂತೆ ಸೂಚಿಸಲಾಗಿತ್ತು. ಅದು ಇನ್ನೂ ಶುರುವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next