Advertisement

ನದಿಗೆ ಉರಳಿದ ಬಸ್‌: 13 ಮಂದಿ ದುರ್ಮರಣ

07:42 AM Jan 27, 2018 | Team Udayavani |

ಕೊಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್‌ವೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ 13 ಜನ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೊಲ್ಲಾಪುರದ ಬಳಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಮಿನಿ ಬಸ್‌ ಗಣಪತಿ ಪುಲೆಯಿಂದ ಪುಣೆಗೆ ಚಲಿಸುತಿದ್ದ ಸಂದರ್ಭದಲ್ಲಿ ಈ ದುರ್ಘ‌ಟನೆ ಸಂಭವಿಸಿದೆ. ಮೃತಪಟ್ಟವರೆಲ್ಲ ಪುಣೆಯ ಬಲೆವಾಡಿ ಪ್ರದೇಶದವರೆಂದು ತಿಳಿದು ಬಂದಿದೆ. ಬಸ್‌ನಲ್ಲಿ ಒಟ್ಟ 15 ಜನ ಪ್ರಯಾಣಿಕರಿದ್ದರೆಂದು ವರದಿಯಾಗಿದ್ದು, ಇಬ್ಬರ  ಸ್ಥಿತಿ ಗಂಭೀರವಾಗಿದ್ದು ಕೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಹಾಗೂ ಅಗ್ನಿಶಾಮಕ ಸಿಬಂದಿ ಸ್ಥಳಕ್ಕಾಗಮಿಸಿ ಕಾರ್ಯಚರಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next