Advertisement

ಕೋಲಾರ : ಬಾವಿಯಲ್ಲಿ ಅಪರಿಚಿತರ ನಾಲ್ಕು ಶವಗಳು ಪತ್ತೆ 

02:30 PM Jul 12, 2018 | |

ಮುಳಬಾಗಿಲು:  ತಾಲೂಕಿನ ಬೆಟ್ಟಗೇರ ಹಳ್ಳಿ ಎಂಬಲ್ಲಿ ನೀಲಗಿರಿ ತೋಪಿನಲ್ಲಿ ನಾಲ್ವರು ಅಪರಿಚಿತರ ಶವಗಳು ಬಾವಿಯೊಂದರಲ್ಲಿ ತೇಲುತ್ತಿರುವುದು  ಗುರುವಾರ ಬೆಳಗ್ಗೆ ಕಂಡು ಬಂದಿದೆ. 

Advertisement

ನಾರಾಯಣ ಸ್ವಾಮಿ ಎನ್ನುವವರ ಜಮೀನಿನಲ್ಲಿರುವ ಬಾವಿಯಲ್ಲಿ ಶವಗಳು ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಬಾಲಕಿಯರದ್ದಾಗಿವೆ.  

ಶವಗಳಾಗಿ ಪತ್ತೆಯಾದವರು ಗ್ರಾಮದವರಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು,ಅಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿ  ಶವಗಳನ್ನು ಮೇಲಕ್ಕೆತ್ತಿದ್ದಾರೆ. 

ಒಬ್ಟಾಕೆ ಮಕ್ಕಳಿಬ್ಬರನ್ನು  ಸೊಂಟಕ್ಕೆ ಕಟ್ಟಿಕೊಂಡ ರೀತಿಯಲ್ಲಿ  ಕಂಡು ಬಂದಿದ್ದು , ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ.

ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next