Advertisement

Nipah: ಕೋಯಿಕ್ಕೋಡ್‌: ಕೇಂದ್ರ ತಂಡದ ಪರಿಶೀಲನೆ, ಸಭೆ

10:58 PM Sep 14, 2023 | Team Udayavani |

ತಿರುವನಂತಪುರ/ಕೋಯಿಕ್ಕೋಡ್‌: ನಿಫಾ ಸೋಂಕು ಕಂಡುಬಂದಿರುವ ಕೇರಳದ ಕೋಯಿಕ್ಕೋಡ್‌ ಜಿಲ್ಲೆಗೆ ಆರು ಸದಸ್ಯರ ಕೇಂದ್ರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಸೋಂಕು ಕಂಡು ಬಂದಿರುವ ಸ್ಥಳಗಳಿಗೆ ಕೂಡ ತಂಡ ಭೇಟಿ ನೀಡಿದೆ. ಜತೆಗೆ ಕೇರಳ ಆರೋಗ್ಯ ಇಲಾಖೆಯ ಜತೆ ಪರಾಮರ್ಶೆ ನಡೆಸಿದೆ.

Advertisement

ಇನ್ನೊಂದೆಡೆ ತಿರುವನಂತ­ಪುರ­ದಲ್ಲಿ ಸಭೆ ನಡೆಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್‌, ಸೋಂಕು ನಿವಾರಣೆಗೆ ಬೇಕಾಗಿರುವ ಮೊನೊಕ್ಲೋನಲ್‌ ಪ್ರತಿಕಾಯ ರಾಜ್ಯಕ್ಕೆ ತಲುಪಿದೆ. ಆದರೆ ಇದು ಎಷ್ಟರ ಮಟ್ಟಿಗೆ ಪ್ರಯೋಜನ­ವಾಗಲಿದೆ ಎಂಬುದು ಕ್ಲಿನಿಕಲ್‌ ಟ್ರಯಲ್‌ನಲ್ಲಿ ಗೊತ್ತಾಗಿಲ್ಲ. ಸದ್ಯಕ್ಕೆ ಈ ಔಷಧ ನೀಡದೆ ದಾರಿ ಇಲ್ಲ ಎಂದು ಹೇಳಿದ್ದಾರೆ. ಸೋಂಕು ಪ್ರಕರಣ 5ಕ್ಕೆ ಏರಿಕೆಯಾಗಿ­ದ್ದರೂ, ಅವರೊಂದಿಗೆ ಸಂಪರ್ಕದಲ್ಲಿ ಇರುವ 76 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಹೊಸ ಲ್ಯಾಬ್‌: ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ಕಲ್ಲಿಕೋಟೆಗೆ ಸಂಚಾರಿ ಪ್ರಯೋಗ ಶಾಲೆಯನ್ನು ಕಳುಹಿಸಿಕೊಟ್ಟಿದ್ದು, ಇನ್ನು ಕ್ಷಿಪ್ರಗತಿಯಲ್ಲಿ ವೈರಸ್‌ ದೃಢಪಡಿಸಲು ನೆರವಾಗಿದೆ. ಬಿಎಸ್‌ಎಲ್‌-3 ದರ್ಜೆ ಹೊಂದಿರುವ ದಕ್ಷಿಣ ಏಷ್ಯಾದ ಮೊದಲ ಸಂಚಾರಿ ಲ್ಯಾಬ್‌ ಎಂಬ ಹೆಗ್ಗಳಿಕೆಗೆ ಕೂಡ ಅದು ಪಾತ್ರವಾಗಿದೆ. ಇದರಿಂದಾಗಿ ಸ್ಯಾಂಪಲ್‌ಗ‌ಳನ್ನು ಪುಣೆಗೆ ಕಳುಹಿಸದೆ, ಕಲ್ಲಿಕೋಟೆಯಲ್ಲಿಯೇ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಡಿಸಲು ಸಾಧ್ಯವಾಗಲಿದೆ.

ಅಪಾಯಕಾರಿಯಲ್ಲ: ಪರಿಸ್ಥಿತಿ ಬಗ್ಗೆ ಮಾತನಾಡಿದ ಆರೋಗ್ಯ ಖಾತೆ ಮಾಜಿ ಸಚಿವೆ ಕೆ.ಕೆ.ಶೈಲಜಾ 2018ಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಪರಿಸ್ಥಿತಿ ಅಪಾಯಕಾರಿಯಾಗಿಲ್ಲ ಆ ಸಂದರ್ಭದಲ್ಲಿ ಅದು ಹೊಸತಾಗಿತ್ತು ಎಂದರು. ಕಲ್ಲಿಕೋಟೆ ಜಿಲ್ಲೆಯಲ್ಲಿ ಶನಿವಾರ­ದವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕಂಟೈನ್‌ಮೆಂಟ್‌ ವಲಯಗಳಲ್ಲಿ ಬೀಚ್‌, ಪಾರ್ಕ್‌ಗಳನ್ನು ಬಂದ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next