Advertisement

ಕೊಹ್ಲಿ 31ನೇ ಹುಟ್ಟುಹಬ್ಬ; ಭಾವನಾತ್ಮಕ ಪತ್ರ

09:27 AM Nov 06, 2019 | sudhir |

ಹೊಸದಿಲ್ಲಿ: ಸಮಕಾಲೀನ ಕ್ರಿಕೆಟ್‌ ಜಗತ್ತಿನ ಅತ್ಯಂತ ಯಶಸ್ವಿ ಬ್ಯಾಟ್ಸ್‌ ಮನ್‌ ವಿರಾಟ್‌ ಕೊಹ್ಲಿ 31ನೇ ವರ್ಷಕ್ಕೆ ಕಾಲಿರಿಸಿ¨ªಾರೆ. ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಎಲ್ಲ ಕ್ರಿಕೆಟಿಗರ ಹಾಗೆಯೇ ವಿರಾಟ್‌ ಕೊಹ್ಲಿ ಕೂಡ ಸಾಕಷ್ಟು ವೈಫ‌ಲ್ಯಗಳನ್ನು ಎದುರಿಸಿದ್ದರು.

Advertisement

31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿರಾಟ್‌ ಕೊಹ್ಲಿ, ಜೀವನ ಪಾಠ ಹಾಗೂ ಪ್ರಯಾಣದ ಬಗ್ಗೆ 15ರ ಹರೆಯದಲ್ಲಿ ತಮಗೆ ತಾವೇ ಬರೆದಿರುವ ಸ್ಫೂರ್ತಿದಾಯಕ ಸಂದೇಶವನ್ನು ಅಭಿಮಾನಿಗಳ ಜತೆಗೆ ಹಂಚಿ¨ªಾರೆ.

ಸ್ವಯಂ ಲಿಖೀತ ಪತ್ರದಲ್ಲಿ, ಜೀವನದಲ್ಲಿ ಅವಕಾಶಗಳಿಗೆ ಹೇಗೆ ಸಿದ್ಧವಾಗಿರಬೇಕು ಹಾಗೂ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ವಿರಾಟ್‌ ವಿವರಿಸಿದ್ದಾರೆ. ಹಾಗೆಯೇ ತಮ್ಮನ್ನು ಇಷ್ಟಪಡದ ಜನರ ಬಗ್ಗೆ ತಲೆಕೆಡಿಸಿಕೊಳ್ಳದೇ ವೈಫ‌ಲ್ಯಗಳಿಂದ ಹೇಗೆ ಎದ್ದು ಬರಬೇಕು ಎಂಬುದನ್ನು ಕೂಡ ತಿಳಿಸಿದ್ದಾರೆ. ತಂದೆ ಪ್ರೇಮ್‌ ಕೊಹ್ಲಿ ಬಗ್ಗೆ ಬಹಳಷ್ಟು ಪ್ರೀತಿಯಿದೆ. ಶೂ ಖರೀದಿಸಲು ನಿರಾಕರಿಸಿದ ತಂದೆ ಬಳಿಕ ಆತ್ಮೀಯವಾಗಿ ಆಲಂಗಿಸಿಕೊಂಡಿರುವ ಬಗ್ಗೆಯೂ ವಿರಾಟ್‌ ಪತ್ರದಲ್ಲಿ ಬರೆದಿದ್ದಾರೆ.

ವಿರಾಟ್‌ ಪತ್ರದಲ್ಲೇನಿದೆ
ನನ್ನ ಭವಿಷ್ಯದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹೊಂದಿರಬಹುದು. ಕ್ಷಮಿಸಿ, ಅವುಗಳಲ್ಲಿ ಹೆಚ್ಚಿನದನ್ನು ಉತ್ತರಿಸಲು ಹೋಗುವುದಿಲ್ಲ. ಏಕಂದರೆ ಪ್ರತಿಯೊಂದು ಸವಾಲು ರೋಮಾಂಚಕಾರಿ, ನಿರಾಸೆಯಿಂದ ಕಲಿಯಲು ಸಾಕಷ್ಟಿರುತ್ತದೆ ನಿಮಗಿದು ಈಗ ಅರ್ಥವಾಗಲ್ಲ. ಯಾಕೆಂದರೆ ಗಮ್ಯಸ್ಥಾನಕ್ಕಿರುವ ಪ್ರಯಾಣವು ಹೆಚ್ಚು ಮುಖ್ಯವೆನಿಸಿದೆ. ಈ ಪ್ರಯಾಣವು ಸೂಪರ್‌ ಎಂದು ಬರೆದಿ¨ªಾರೆ.

ನಾನು ನಿಮ್ಮ ಬಳಿ ಹೇಳ ಬಯಸುವುದೇನೆಂದರೆ ಜೀವನದಲ್ಲಿ ಹಲವಾರು ಏರುಪೇರುಗಳಿರುತ್ತವೆೆ. ಆದರೆ ನಮ್ಮ ಹಾದಿಗೆ ಬರುವ ಪ್ರತಿಯೊಂದು ಅವಕಾಶಕ್ಕೂ ಸಿದ್ಧರಿರಬೇಕು. ಅವಕಾಶ ಸಿಕ್ಕಾಗ ಅದನ್ನು ಬಾಚಿಕೋ, ಎಂದಿಗೂ ಲಘುವಾಗಿ ಪರಿಗಣಿಸಬೇಡ. ವೈಫ‌ಲ್ಯ ಅನುಭವಿಸಬಹುದು. ಎಲ್ಲರೂ ವೈಫ‌ಲ್ಯ ಅನುಭವಿಸುತ್ತಾರೆ. ಆದರೆ ಎಂದಿಗೂ ಪುಟಿದೇಳಲು ಮರೆಯುವುದಿಲ್ಲ ಎಂಬುದನ್ನು ನಿನಗೆ ನೀನೇ ಭರವಸೆ ಕೊಡು. ಮೊದಲ ಬಾರಿ ಆಗದಿದ್ದರೆ ಮತ್ತೆ ಪ್ರಯತ್ನಿಸಬೇಕು ಎಂದರು.

Advertisement

ಕುಟುಂಬದವರ ಪ್ರೀತಿ ಮೇಲು
ಕುಟುಂಬದ ಬಗ್ಗೆ ವಿವರಿಸಿದ ಅವರು ನಮ್ಮ ಪೋಷಕರು ಕೆಲವೊಮ್ಮೆ ನಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅನಿಸಬಹುದು. ಆದರೆ ಇದನ್ನು ನೆನಪಿಡು, ನಮ್ಮ ಕುಟುಂಬದವರು ಮಾತ್ರ ಬೇಷರತ್ತಾಗಿ ಪ್ರೀತಿಸುತ್ತಾರೆ. ಅವರನ್ನು ಪ್ರೀತಿಸು, ಅವರನ್ನು ಗೌರವಿಸು, ಅವರೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಬೇಕು. ಅಪ್ಪನಿಗೆ ಹೇಳು, ನೀವು ಅವನನ್ನು ಇಷ್ಟಪಡುತ್ತೀರಿ ಎಂದು. ಇಂದೇ ಹೇಳು ಎಂದು ವಿರಾಟ್‌ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next