Advertisement

Kodikanyan: ಅಕ್ರಮ ಮರಳುಗಾರಿಕೆ; ಟೆಂಪೋ ವಶ

08:50 PM Sep 13, 2024 | Team Udayavani |

ಕೋಟ: ಸಾಲಿಗ್ರಾಮ ಸಮೀಪ ಕೋಡಿ-ಕನ್ಯಾಣದ ರಾಮಮಂದಿರದ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟೆಂಪೋವನ್ನು ಹಾಗೂ ಚಾಲಕ ಗಣೇಶ ಹಾಗೂ ಜೆ.ಸಿ.ಬಿ. ಆಪರೇಟರ್‌ ಚರಣ್‌ರಾಜ್‌ ಎನ್ನುವವರನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಸೆ. 12ರಂದು ನಡೆದಿದೆ.

Advertisement

ಕೋಟ ಪೊಲೀಸ್‌ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕಿ ಸುಧಾ ಪ್ರಭು ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಾಹನವನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸಾಲಿಗ್ರಾಮದ ಪ್ರಕಾಶ ಎನ್ನುವವರ ಸೂಚನೆಯಂತೆ ಅಂಥೋನಿಯವರ ಮನೆಯ ಅಂಗಳದ ನೆಲದಲ್ಲಿ ಹುದುಗಿಸಿ ಸಂಗ್ರಹಿಸಿಟ್ಟ ಮರಳು ರಾಶಿಯಲ್ಲಿನ ಮರಳನ್ನು ಜೆ.ಸಿ.ಬಿ ಮುಖಾಂತರ ತೆಗೆದು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಟೆಂಪೋ ಚಾಲಕ ಹಾಗೂ ಜೆ.ಸಿ.ಬಿ ಆಪರೇಟರ್‌ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next