Advertisement

ಮುಗ್ಧರ ಬದುಕಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಚೆಲ್ಲಾಟ: ಸಚಿವ ಸೋಮಣ್ಣ ವಾಗ್ದಾಳಿ

02:45 PM Dec 14, 2020 | Mithun PG |

ಬೆಳ್ತಂಗಡಿ: ಕೋಡಿಹಳ್ಳಿ ಚಂದ್ರಶೇಖರ್ ಅವರು ಸಾಮಾನ್ಯ ಕಾರ್ಮಿಕರ ಬದುಕಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ಧರ್ಮಸ್ಥಳದಲ್ಲಿ ನಿಂತು ಹೇಳುತ್ತಿದ್ದೇನೆ, ಕೋಡಿಹಳ್ಳಿ ಚಂದ್ರಶೇಖರ್ ಗೆ ಒಳ್ಳೆಯದಾಗಲ್ಲ ಎಂದು ರಾಜ್ಯ ವಸತಿ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

Advertisement

ರಸ್ತೆ ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ವಿ. ಸೋಮಣ್ಣ ಸೋಮವಾರ ಬೆಂಗಳೂರು ಪ್ರವಾಸ ಕೈಗೊಳ್ಳುವ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

ಕೋಡಿಹಳ್ಳಿ ಚಂದ್ರಶೇಖರ್ ನೌಕರರ ಜತೆ ಚೆಲ್ಲಾಟ ಆಡುತ್ತಿದ್ದಾರೆ. ನೌಕರರ ಕುಟುಂಬದ ಶಾಪ ಸುಮ್ಮನೆ ಬಿಡಲ್ಲ. ‌ನನಗೆ ಕೋಡಿಹಳ್ಳಿ ಇತಿಹಾಸ ಗೊತ್ತಿದೆ. ಅವರು ಸಂಜೆ ಒಳಗಡೆ ಸರಿಯಾದ ಬೆಲೆ ತೆತ್ತಬೇಕಾಗುತ್ತದೆ.

ರಾಜ್ಯದಲ್ಲಿ ಸಾವಿರಾರು ಚಂದ್ರಶೇಖರ್ ಬಂದು ಹೋಗಿದ್ದಾರೆ. ಇನ್ನೊಬ್ಬರ ಬದುಕಿನ ಜತೆ ಚೆಲ್ಲಾಟ ಆಡಿದರೆ ತಕ್ಷಣವೇ ನೋವು ಸಿಗಬಹುದು. ಕೋಡಿಹಳ್ಳಿ ಸಣ್ಣತನದ ಪರಮಾವಧಿಗೆ ಬೆಲೆ ಸಿಗಬಹುದು.  ‘ಕೋಡಿಹಳ್ಳಿ ಚಂದ್ರಶೇಖರ್ ನಾಮಾವಶೇಷ ಆಗ್ತೀರಿ ಹುಷಾರ್’ ಎಂದು ಗುಡುಗಿದರು.

ಇದನ್ನೂ ಓದಿ: ಕೋಡಿಹಳ್ಳಿ ಚಂದ್ರಶೇಖರ್ ಎರಡು ತಲೆ ಹಾವು; ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ: ಈಶ್ವರಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next