Advertisement

ಸದ್ದು ಮಾಡುತ್ತಿದೆ ‘ಕೊಡೆ ಮುರುಗ’ ಟ್ರೇಲರ್

04:11 PM Mar 30, 2021 | Team Udayavani |

ಕೆಲವು ಟ್ರೇಲರ್‌ಗಳು ತಣ್ಣಗೆ ಸದ್ದು ಮಾಡುತ್ತವೆ. ಆ ಸಾಲಿಗೆ ಈಗ “ಕೊಡೆ ಮುರುಗ’ ಸೇರಿದೆ. ಇತ್ತೀ ಚೆ ಗಷ್ಟೇ ಬಿಡುಗಡೆಯಾದ ಈ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ. ಪಕ್ಕಾ ಕಾಮಿಡಿ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಟ್ರೇಲರ್‌ ನಲ್ಲಿ ಸಾಕಷ್ಟು ಫ‌ನ್ನಿ ಡೈಲಾಗ್‌ಗಳು ಕೂಡಾ ಇವೆ. ಸುಬ್ರಮಣ್ಯ ಪ್ರಸಾದ್‌ ಈ ಚಿತ್ರದ ನಿರ್ದೇಶಕರು.

Advertisement

ಈ ಹಿಂದೆ ಪ್ರಿಯಾಂಕಾ ಉಪೇಂದ್ರ ನಟನೆಯ “ಮಮ್ಮಿ’ ಸಿನಿಮಾವನ್ನು ನಿರ್ಮಿಸಿರುವ ಕೆ.ರವಿಕುಮಾರ್‌ ಈ ಚಿತ್ರದ ನಿರ್ಮಾಪಕರು. ಈಗ ಮತ್ತೂಂದು ಹೊಸ ಬಗೆಯ ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನು ಕೂಡಾ ಅದ್ಧೂರಿಯಾಗಿಯೇ ನಿರ್ಮಿಸಿದ್ದಾರೆ. ಕೆಆರ್‌ಕೆ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಇವರಿಗೆ ಅಶೋಕ್‌ ಶಿರಾಲಿ ಸಾತ್‌ ನೀಡಿದ್ದಾರೆ.

ಇದನ್ನೂ ಓದಿ:ಕೆಂಪೇಗೌಡ ಈಗ ಹೀರೋ: ‘ಕಟ್ಲೆ’ ಮೂಲಕ ಅದೃಷ್ಟ ಪರೀಕ್ಷೆ

ಗಾಂಧಿನಗರದ ರೆಗ್ಯುಲರ್‌ ಕಾನ್ಸೆಪ್ಟ್ ಅನ್ನು ಬಿಟ್ಟು ಈ ಸಿನಿಮಾ ಮಾಡಲಾಗಿದ್ದು, ಪಾತ್ರದಲ್ಲಿ ಮುನಿಕೃಷ್ಣ ಹಾಗೂ ಸುಬ್ರಮಣ್ಯ ಪ್ರಸಾದ್‌ ಇದ್ದಾರೆ. ನಾಯಕಿಯಾಗಿ ಪಲ್ಲವಿಗೌಡ ಬಣ ಹಚ್ಚಿದ್ದಾರೆ. ಈ ಹಿಂದೆ “ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಟನಾಗಿ ಅಬ್ಬರಿಸಿದ್ದ ಮುನಿಕೃಷ್ಣ ಈ ಚಿತ್ರದಲ್ಲಿ ಕೊಡೆ ಮುರುಗನಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ಅರವಿಂದ ರಾವ್‌, ರಾಕ್‌ಲೈನ್‌ ಸುಧಾಕರ್‌, ಕುರಿ ಪ್ರತಾಪ್‌, ಸ್ವಾತಿ ಗುರುದತ್‌, ಅಶೋಕ್‌, ಸ್ವಯಂವರ ಚಂದ್ರು, ತುಮಕೂರು ಮೋಹನ್‌, ಮೋಹನ್‌ ಜುನೇಜಾ ನಟಿಸಿದ್ದಾರೆ. ಇನ್ನು, ಚಿತ್ರದ ವಿಶೇಷ ಹಾಡೊಂದಕ್ಕೆ “ಲೂಸ್‌ ಮಾದ’ ಯೋಗಿ ಹೆಜ್ಜೆ ಹಾಕಿದ್ದಾರೆ. ಗಾಂಧಿನಗರದಲ್ಲಿನ ಕೆಲವು ಘಟನೆಗಳನ್ನು

Advertisement

ಆಧಾರವಾಗಿಟ್ಟುಕೊಂಡು, ಅದನ್ನು ಮನರಂಜನೆಯ ಅಂಶವಾಗಿ ಪರಿವರ್ತಿಸಿ ಈ ಸಿನಿಮಾ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next