Advertisement

Kodagu: ಸೆ. 15ರ ವರೆಗೆ ಸಾಲ ವಸೂಲು ಮಾಡದಂತೆ ಡಿಸಿ ಸೂಚನೆ

11:08 PM Aug 07, 2024 | |

ಮಡಿಕೇರಿ : ಕೊಡಗಿನಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದೆ ಜೀವನ ನಡೆಸಲು ತೊಂದರೆ ಉಂಟಾಗಿದ್ದು, ಹಣಕಾಸು ಸಂಸ್ಥೆಗಳು/ಗಿರವಿದಾರರು ಹಾಗೂ ಮೈಕ್ರೋ ಫೈನಾನ್ಸ್‌ ಸಾಲ ಸೌಲಭ್ಯ ನೀಡುವ ಸಂಸ್ಥೆಗಳು ಸಾಲಗಾರರಿಂದ ಸೆ. 15ರ ವರೆಗೆ ಸಾಲ ವಸೂಲಿ ಮಾಡಬಾರದು ಎಂದು ಜಿಲ್ಲಾಧಿಕಾರಿ ವೆಂಕಟರಾಜ ಅವರು ಸೂಚನೆ ನೀಡಿದ್ದಾರೆ.

Advertisement

ಕೆಲವರು ಕೃಷಿಯೇತರ ಸಾಲಗಳನ್ನು ಪಡೆದಿದ್ದು, ಅವುಗಳನ್ನು ಪ್ರತಿ ವಾರ ಅಥವಾ ಮಾಸಿಕ ಕಂತು ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ. ಕೆಲಸ ಇಲ್ಲದೆ ಕಷ್ಟದಲ್ಲಿರುವ ರೈತರಿಂದ ಸದ್ಯ ಸಾಲ ವಸೂಲಿಗೆ ಮುಂದಾದರೆ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾದೀತು. ಆದ್ದರಿಂದ ಈ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next