Advertisement

ಕೊಡಗು, ಕೇರಳ ಪ್ರವಾಹಕ್ಕೆ ಸ್ವಯಂಕೃತ ತಪ್ಪುಗಳೇ ಕಾರಣ; ಹೈಕೋರ್ಟ್

06:46 PM Aug 20, 2018 | Sharanya Alva |

ಬೆಂಗಳೂರು:ಕೊಡಗು ಹಾಗೂ ಕೇರಳ ಪ್ರವಾಹ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ಪ್ರವಾಹದ ಆಪತ್ತು ಬಂದೊದಗಲು ಮನುಷ್ಯನ ತಪ್ಪುಗಳೇ ಕಾರಣ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸೋಮವಾರ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ರಿಟ್ ಅರ್ಜಿಯ ವಿಚಾರಣೆ ವೇಳೆ ಮೌಖಿಕವಾಗಿ ಈ ಆತಂಕ ವ್ಯಕ್ತಪಡಿಸಿದ ಸಿಜೆಐ, ಪ್ರಕೃತಿ ವಿರುದ್ಧ ಮಾನವ ಹೋದಾಗ ಈ ರೀತಿ ಆಗುತ್ತೆ. ಇದೇನು ಏಕಾಏಕಿ ಒಂದೇ ದಿನದಲ್ಲಿ ಸಂಭವಿಸಿದ್ದಲ್ಲ. ಭೂಕಂಪ ಆಗಿದ್ದರೆ ಒಂದೇ ದಿನದಲ್ಲಿ ಸಂಭವಿಸಿದ್ದು ಅಂತ ಹೇಳಬಹುದು. ಆದರೆ ಇದು ಮಾನವನ ಸ್ವಯಂಕೃತ ಅಪರಾಧಗಳಿಂದ ಆದ ತಪ್ಪುಗಳಿಂದ ಸಂಭವಿಸಿದ್ದು ಎಂದು ಹೇಳಿದರು.

ಇನ್ನಾದರು ನಾವು ಎಚ್ಚೆತ್ತುಕೊಳ್ಳಬೇಕು. ಮನುಷ್ಯನಿಂದ ಪ್ರಕೃತಿಗೆ ಆಪತ್ತು ಬಂದೊದಗಿದೆ. ಎಲ್ಲೋ ನಾವೆ ಇದಕ್ಕೆಲ್ಲಾ ಕಾರಣ ಅಂತ ಅನ್ನಿಸುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next