Advertisement

ಕೊಡಗಿಗೆ ಐರಾವತ ಕ್ಲಬ್‌ಕ್ಲಾಸ್‌ ಬಸ್‌ ಆರಂಭ

10:47 PM Nov 23, 2019 | Lakshmi GovindaRaj |

ಬೆಂಗಳೂರು: ಕೊಡಗು ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ, ಈಗಾಗಲೇ(ಶುಕ್ರವಾರದಿಂದ) ಬೆಂಗಳೂರು-ವಿರಾಜಪೇಟೆ, ಬೆಂಗಳೂರು-ಮಡಿಕೇರಿ ಮಾರ್ಗಗಳಲ್ಲಿ ಐರಾವತ ಕ್ಲಬ್‌ಕ್ಲಾಸ್‌ ಬಸ್‌ ಸೇವೆ ಆರಂಭಿಸಿದೆ. ಬೆಂಗಳೂರು-ಮಡಿಕೇರಿ ಮಾರ್ಗದ ಬಸ್‌ ನಿತ್ಯ ಬೆಳಗ್ಗೆ 5.30ಕ್ಕೆ ಬೆಂಗಳೂರಿನಿಂದ ಹೊರಟು ಮೈಸೂರು, ಕುಶಾಲನಗರ ಮಾರ್ಗವಾಗಿ ಮಧ್ಯಾಹ್ನ 12ಕ್ಕೆ ಮಡಿಕೇರಿ ತಲುಪಲಿದೆ.

Advertisement

ಮರಳಿ ಮಡಿಕೇರಿಯಿಂದ ಮಧ್ಯಾಹ್ನ 2.30ಕ್ಕೆ ಹೊರಟು ರಾತ್ರಿ 8.30ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಬೆಂಗಳೂರು-ವಿರಾಜಪೇಟೆ ಮಾರ್ಗದ ಬಸ್‌ ನಿತ್ಯ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಟು ಮೈಸೂರು, ಗೋಣಿಕೊಪ್ಪ ಮಾರ್ಗವಾಗಿ ರಾತ್ರಿ 9.45ಕ್ಕೆ ವಿರಾಜಪೇಟೆ ತಲುಪಲಿದೆ. ಬೆಳಗ್ಗೆ ವಿರಾಜಪೇಟೆಯಿಂದ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.20ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಎರಡೂ ಮಾರ್ಗದಲ್ಲೂ ಪ್ರಯಾಣ ದರ 530 ರೂ. ನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next