Advertisement
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ 2017-18ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
Related Articles
Advertisement
ಬದುಕಲು ಆಹಾರದಷ್ಟೇ ಜಾnನ ಕೂಡ ಮುಖ್ಯ ಎಂಬುದನ್ನು ಬಹುಬೇಗ ಅರಿತುಕೊಂಡು ಸಮಾಜದ ಏಳಿಗೆಗಾಗಿ ಜಾnನ ದಾಸೋಹದಲ್ಲಿ ತೊಡಗಿಕೊಂಡಂತಹ ಧಾರ್ಮಿಕ ತಳಹದಿಯುಳ್ಳ ವಿದ್ಯಾಸಂಸ್ಥೆಗಳುಳ್ಳ ರಾಜ್ಯಗಳ ಪೈಕಿ ಕರ್ನಾಟಕವೇ ಪ್ರಥಮ ಎಂದು ಹೇಳಿದರು.
ವ್ಯಕ್ತಿತ್ವ ನಿರ್ವಹಿಸಿ: ಜೆಎಸ್ಎಸ್ ಕಾಲೇಜು ಸಮುತ್ಛಯದ ಮುಖ್ಯ ಕಾರ್ಯನಿರ್ವಾಹಕ ಪೊ›.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜತೆಗೆ ಉತ್ತಮ ವ್ಯಕ್ತಿತ್ವ ನಿರ್ವಹಣೆ, ಸರ್ವತೋಮುಖ ಬೆಳವಣಿಗೆಗಳತ್ತಲೂ ಗಮನಹರಿಸಬೇಕು. ಇದಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಬೇಕು ಎಂದರು.
ಕೈಗೆಟುಕುವ ವಿಷಯದಲ್ಲಿ ಎಚ್ಚರ ವಹಿಸಿ: ಜೆಎಸ್ಎಸ್ ಮಹಾ ವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪೊ›.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಜಾnನ ಸ್ಫೋಟದ ಯುಗದಲ್ಲಿರುವ ನಾವು ನಮ್ಮ ಕೈಗೆಟುಕುವ ವಿಷಯಗಳನ್ನು ಬಹಳ ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕಾಗಿದೆ.
ಅಕ್ಷರ ಜಾnನವಿಲ್ಲದ ಜನರು ಇಡೀ ಜಗತ್ತಿನ ಒಳಿತಿಗಾಗಿ ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತಿರುವ ನಿದರ್ಶನಗಳು ನಮ್ಮ ಮುಂದಿರುವಾಗ ಅಕ್ಷರ ಜಾnನ ಹೊಂದಿರುವ ಇಂದಿನ ಯುವ ಪೀಳಿಗೆಯ ಮನೋಭಾವ ಯಾವ ಗುಣಮಟ್ಟದ್ದಾಗಿರಬೇಕು ಎನ್ನುವುದನ್ನು ಆಲೋಚಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸತತ ಮೂರು ವರ್ಷಗಳಿಂದ ಸಾಂದರ್ಭಿಕ, ನಿರ್ಬಂದಿತ ಅಥವಾ ಗಳಿಕೆ ರಜೆ ಯಾವುದನ್ನೂ ಪಡೆಯದೇ ಕಾರ್ಯನಿರ್ವಹಿಸಿದ ಕನ್ನಡ ಉಪನ್ಯಾಸಕ ಟಿ.ಗುರುಪಾದಸ್ವಾಮಿ ಹಾಗೂ ಮೈಸೂರು ವಿವಿಯಿಂದ ಪಿಎಚ್.ಡಿ.ಪಡೆದ ಸಂಸ್ಕೃತ ಉಪನ್ಯಾಸಕಿ ಡಾ.ಕೋಮಲ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರಮಟ್ಟದ ಕ್ರೀಡಾಪಟು ಕುಮಾರಿ ಷಾಹೇಜಹಾನಿ, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಟಿ.ಗುರುಪಾದ ಸ್ವಾಮಿ, ಕ್ರೀಡಾ ಸಮಿತಿ ಸಂಚಾಲಕ ಟಿ.ಅರವಿಂದ್ ಉಪಸ್ಥಿತರಿದ್ದರು.