Advertisement

ಗ್ರಾಮಸ್ಥರಿಗೆ ಅಕ್ಕಿ ವಿತರಣೆ, ಕೂಲಿ ಕಾರ್ಮಿಕರಿಗೆ ಅನ್ನದಾಸೋಹ

11:29 AM Apr 12, 2020 | sudhir |

ಮಲ್ಪೆ: ಕಿದಿಯೂರು ಉದಯ ಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ಹೇರೂರು ಗ್ರಾ.ಪಂ.. ವ್ಯಾಪ್ತಿಯಲ್ಲಿ ಗ್ರಾಮದ ಬಡ ಜನರಿಗೆ ತಲಾ 5 ಕೆ.ಜಿ. ಅಕ್ಕಿಯನ್ನು ವಿತರಿಸಲಾಯಿತು. ಉಚ್ಚ ನ್ಯಾಯಾಲಯದ ನ್ಯಾಯವಾದಿ ಎಚ್‌. ಪವನ್‌ಚಂದ್ರ ಶೆಟ್ಟಿ ಅವರು ಅಕ್ಕಿಯನ್ನು ವಿತರಿಸಿದರು.

Advertisement

ಉಡುಪಿ ನಗರಸಭೆಯ ಶೀರಿಬೀಡು ಮತ್ತು ಕಿದಿಯೂರಿನಲ್ಲಿ ನೆಲೆಸಿರುವ ಸುಮಾರು 250ಕ್ಕೂ ಅಧಿಕ ಬಡ ಕುಟುಂಬಗಳಿಗೆ ತಲಾ 5ಕೆ.ಜಿ. ಅಕ್ಕಿಯನ್ನು ಮನೆ ಮನೆಗೆ ತೆರಳಿ ವಿತರಿಸಲಾಯಿತು. ಮಲ್ಪೆ, ಕೊಡವೂರು ಅಂಬಾಗಿಲು ಶಿರಿಬೀಡು ಭಾಗದ 600 ವಲಸೆ ಕಾರ್ಮಿಕರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ಟ್ರಸ್ಟ್‌ನ ಅಧ್ಯಕ್ಷ ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ , ಮಾಜಿ ರೋಟರಿ ಗವರ್ನರ್‌ ಜ್ಞಾನವಸಂತ ಶೆಟ್ಟಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ, ನಗರಸಭಾ ಸದಸ್ಯ ಟಿ.ಜಿ. ಹೆಗ್ಡೆ, ಸಂತೋಷ್‌ ಜತ್ತನ್‌ ಹೇರೂರು, ಹೇರೂರು ಗ್ರಾ.ಪಂ. ಉಪಾಧ್ಯಕ್ಷ ಉದಯ ಕಾಮತ್‌, ಶಂಕರ ಪೂಜಾರಿ ಹೇರಂಜೆ, ವಿನೋದ್‌, ಸುಧೀರ್‌, ಸುರೇಶ್‌ ಶೇರಿಗಾರ್‌, ರಂಜನ್‌ದಾಸ್‌ ಶೆಟ್ಟಿ, ಲಕ್ಷ್ಮೀಪ್ರಸಾದ್‌, ಕೃಷ್ಣ ಪ್ರಸಾದ್‌, ಉಡುಪಿ ಸಿಟಿ ಜೇಸಿಐ ಅಧ್ಯಕ್ಷ ಜಗದೀಶ್‌ ಶೆಟ್ಟಿ ಕೀಳಿಂಜೆ, ಪ್ರಮುಖರಾದ ರಾಮರಾಜ್‌ ಕಿದಿಯೂರು, ಗಿರೀಶ್‌ ಅಮೀನ್‌ ಕಿದಿಯೂರು, ನವೀನ್‌ ಕುಂದರ್‌ಅಕ್ಷಯ್‌, ವಿಜಯ ಶೆಟ್ಟಿ, ನಾಗರಾಜ್‌ ಕರ್ಕೇರ, ಶಶಿಧರ ಸುವರ್ಣ, ಸುಂದರ ಪೂಜಾರಿ, ವಿಷ್ಣು ಪೂಜಾರಿ, ಮಹೇಶ್‌ ಕುಮಾರ್‌, ಸಲಿಂ ಅಂಬಾಗಿಲು, ಭರತ್‌ ಭೂಷಣ್‌ ಮೂಡುಬೆಟ್ಟು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next