Advertisement

ಪ್ರತಿಭೆಯಿಂದಲೇ ವಿರಾಟ್‌ಗೊಲಿದ `ಕಿಸ್’ಅದೃಷ್ಟ!

09:59 AM Sep 20, 2019 | Naveen |

ನಿರ್ದೇಶಕ ಎ.ಪಿ ಅರ್ಜುನ್ ತಮ್ಮ ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಮೊದಲಿನಿಂದಲೂ ಬಲು ಕಟ್ಟುನಿಟ್ಟು. ಒಂದಷ್ಟು ಮಾರ್ಗಗಳನ್ನು ಅನುಸರಿಸಿ ಅಳೆದೂ ತೂಗಿಯೇ ಅವರು ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಿಸ್ ಚಿತ್ರದ ಕಥೆಯೇ ಫ್ರೆಶ್ ಆಗಿದ್ದರಿಂದ ಅದಕ್ಕೆ ಹೊಸಾ ಪ್ರತಿಭೆಗಳನ್ನೇ ನಾಯಕ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಬೇಕೆಂಬ ನಿರ್ಧಾರವನ್ನು ಅರ್ಜುನ್ ಮಾಡಿದ್ದರು. ನಾಯಕನ ಪಾತ್ರಕ್ಕಂತೂ ಆಡಿಷನ್ ಕರೆದು, ಅದಕ್ಕೆ ಬಂದ ನೂರಾರು ಮಂದಿಯಲ್ಲಿ ಒಂದಷ್ಟು ಜನರನ್ನು ಸೆಲೆಕ್ಟ್ ಮಾಡಿ ಕಡೆಗೂ ಅದರಲ್ಲಿ ಸೂಕ್ತವೆನಿಸಿದ ವಿರಾಟ್‌ರನ್ನು ನಾಯಕನಾಗಿ ನಿಕ್ಕಿ ಮಾಡಲಾಗಿತ್ತು.

Advertisement

ತಮ್ಮ ಚಿತ್ರಕ್ಕೆ ಹೊಸ ಹುಡುಗರನ್ನು ಹುಡುಕುತ್ತಿರುವುದಾಗಿ ಅರ್ಜುನ್ ಅನೌನ್ಸ್ಮೆಂಟ್ ಕೊಟ್ಟಾಗ ಅವರ ಮೇಲ್ ಬಾಕ್ಸ್ಗೆ ಬಂದು ಬಿದ್ದಿದ್ದು ನಾಲ್ಕು ಸಾವಿರಕ್ಕೂ ಹೆಚ್ಚು ಫೆÇÃಟೋಗಳು. ಅದರಲ್ಲಿ ನೂರಿಪ್ಪತ್ತು ಜನರನ್ನು ಆಯ್ಕೆ ಮಾಡಿಕೊಂಡು ಆಡಿಷನ್ ನಡೆಸಲಾಗಿತ್ತು. ಅದರಲ್ಲಿ ಎಂಟು ಜನ ಫೈನಲಿಸ್ಟ್ ಗಳಾಗಿದ್ದರು. ಆ ಅಂತಿಮ ಪಟ್ಟಿಯಲ್ಲಿ ಕಡೆಗೆ ಹೀರೋ ಆಗುವ ಅದೃಷ್ಟ ಒಲಿದಿದ್ದು ವಿರಾಟ್ ಎಂಬ ಯುವಕನಿಗೆ. ಹಾಗಂತ ಅದನ್ನು ಬರೀ ಅದೃಷ್ಟವೆಂದು ಪರಿಗಣಿಸುವಂತಿಲ್ಲ. ಈ ಆಡಿಷನ್ನಿಗೆ ಅಪ್ಲಿಕೇಷನ್ನು ಹಾಕೋ ಮುಂಚೆ ವಿರಾಟ್ ಅದಕ್ಕೆ ಬೇಕಾದ ಸಂಪೂರ್ಣ ತಯಾರಿಯನ್ನು ಮಾಡಿಕೊಂಡಿದ್ದರು. ಆ ಬಲದಿಂದಲೇ ಪ್ರಭಲ ಸ್ಪರ್ಧೆಯನ್ನೆದುರಿಸಿ ಅವಕಾಶ ಗಿಟ್ಟಿಸಿಕೊಂಡಿದ್ದರು.

ಅಚ್ಚರಿಯ ಸಂಗತಿಯೆಂದರೆ, ಅರ್ಜುನ್ ಈ ಹುಡುಗನನ್ನು ಆಯ್ಕೆ ಮಾಡುವುದಕ್ಕಿಂತ ಮೊದಲು ಆತನನ್ನು ಆಯ್ಕೆ ಮಾಡಿದ್ದದ್ದು ಅರ್ಜುನ್ ಅವರ ತಾಯಿ. ಅರ್ಜುನ್ ಮನೆಯಲ್ಲಿಲ್ಲದ ಅನೇಕ ಸಂದರ್ಭದಲ್ಲಿ ವಿರಾಟ್ ಅರ್ಜುನ್ ಸರ್‌ನ ಮೀಟ್ ಮಾಡಬೇಕು. ಅವರ ಸಿನಿಮಾದಲ್ಲಿ ನಟಿಸಬೇಕು ಎಂದು ಅವರ ತಾಯಿಯ ಬಳಿ ಅರ್ಜಿ ವಗಾಯಿಸಿ ಹೋಗುತ್ತಿದ್ದರಂತೆ. ಹಾಗೆಯೇ ಒಮ್ಮೆ ಅರ್ಜುನ್ ಮನೆಯಲ್ಲಿದ್ದ ಸಂದರ್ಭದಲ್ಲೂ ವಿರಾಟ್ ಅರ್ಜುನ್‌ರ ಮನೆಗೆ ಹೋಗಿದ್ದರಂತೆ. ಆಗ ಖುದ್ದು ಭೇಟಿ ಮಾಡಿದ ನಿರ್ದೇಶಕರು ಆಡಿಷನ್ನಿಗೆ ಬರಲು ಸೂಚಿಸಿದ್ದರಂತೆ. ಅರ್ಜುನ್ ಅವರ ಮಾತಿನಂತೆ ಆಡಿಷನ್‌ನಲ್ಲೂ ಪಾಲ್ಗೊಂಡ ವಿರಾಟ್ ಬಲು ಕಷ್ಟಪಟ್ಟೆ ಆಯ್ಕೆಯಾಗಿದ್ದಾರೆ. ನಂತರ ಅಷ್ಟೇ ಶ್ರದ್ಧೆಯಿಂದ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next