Advertisement

ಮಲಗಿದ್ದ ವ್ಯಕ್ತಿಯ ಮೈಮೇಲೆ ಹರಿದು ಹೋದ ಕಾಳಿಂಗ ಸರ್ಪ!

01:39 PM Jan 10, 2021 | Team Udayavani |

ಚಿಕ್ಕಮಗಳೂರು: ಮಲಗಿದ್ದ ವ್ಯಕ್ತಿಯೋರ್ವ ಮೈಮೇಲೆ ಕಾಳಿಂಗ ಸರ್ಪವೊಂದು ಹರಿದು ಹೋದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

Advertisement

ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಇಲ್ಲಿನ ನಾಗ ಎನ್ನುವವರು ಮಲಗಿದ್ದ ವೇಳೆಯಲ್ಲಿ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಹರಿದು ಹೋಗಿದೆ.

ಮನೆಯೊಳಗೆ ಕಾಳಿಂಗ ಸರ್ಪ ಬಂದಿದ್ದನ್ನು ನೋಡಿದ ಗಾಬರಿಯಾದ ಮನೆಯವರು ಸ್ನೇಕ್ ಅರ್ಜುನ್ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಸ್ನೇಕ್ ಅರ್ಜುನ್ ಆಗಮಿಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:ಅವಕಾಶವಿದ್ದರೆ ರಾಜ್ಯದಲ್ಲಿ ನಾನೇ ಮೊದಲು ಕೋವಿಡ್ ಲಸಿಕೆ ಪಡೆಯುವೆ: ಡಾ.ಕೆ. ಸುಧಾಕರ್

Advertisement
Advertisement

Udayavani is now on Telegram. Click here to join our channel and stay updated with the latest news.

Next