Advertisement

“ಮೋದಿಗೆ ಗಾಂಧಿ ಪುಸ್ತಕ ಕಳುಹಿಸಿ ಕೊಡುತ್ತೇನೆ’: ಕಿಮ್ಮನೆ ರತ್ನಾಕರ್

09:01 PM May 30, 2024 | Suhan S |

ಶಿವಮೊಗ್ಗ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂ ಧೀಜಿ ಕುರಿತು ಓದದೇ ಇರುವ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ಇದು ದೇಶದ ಅತಿ ದೊಡ್ಡ ದುರಂತ. ಆದ್ದರಿಂದ ಗಾಂಧಿ ಬಗ್ಗೆ ಅಧ್ಯಯನ ನಡೆಸಲು ಶೀಘ್ರವೇ ಪುಸ್ತಕ ಕಳುಹಿಸಿ ಕೊಡುತ್ತೇನೆ. ಅರ್ಥ ಆಗುವ ಭಾಷೆಗೆ ತರ್ಜುಮೆ ಮಾಡಿಕೊಂಡು ಮೋದಿ ಓದಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ,  ಸಿನಿಮಾ ನೋಡಿ ಗಾಂಧಿ  ಬಗ್ಗೆ ತಿಳಿದುಕೊಂಡೆ ಎನ್ನುವ ಮೋದಿ ಅವರ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. ದೇಶದಲ್ಲಿ ಗಾಂಧಿ  ಬಗ್ಗೆ ಕಲಿಸದ ಶಾಲೆಗಳು ಎಲ್ಲಿಯೂ ಇಲ್ಲ. ಗಾಂ ಧಿ ಮರಣ ಹೊಂದಿದಾಗ ಅದೇ ಮೊದಲ ಬಾರಿ ಅರ್ಧ ಬಾವುಟ ಹಾರಿಸಲಾಗಿತ್ತು. ಇದರ ಬಗ್ಗೆಯೂ ಮೋದಿಗೆ ಅರಿವಿಲ್ಲ ಎಂದರು.

ಇಲ್ಲಿ ಗಾಂಧಿ ಬಗ್ಗೆ ಸರಿ ಸಮನಾದ ವ್ಯಕ್ತಿ ಮತ್ತೂಬ್ಬರಿಲ್ಲ. ನಾನು ಬಿಜೆಪಿ ಕಾರ್ಯಕರ್ತರ ವಿರುದ್ಧ ಇಲ್ಲ. ಆದರೆ ಆ ಪಕ್ಷದ ನಿಲುವಿನ ವಿರುದ್ಧವಾಗಿದ್ದೇನೆ. ಮುಂದಿನ ದಿನದಲ್ಲಾದರೂ ಮೋದಿ ಅವರು ಗಾಂಧಿಧೀಜಿ ಬಗ್ಗೆ ಅರಿಯಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next