Advertisement

ಕುಖ್ಯಾತ ರೌಡಿ ಕರಿಚಿರತೆ ಎನ್‌ಕೌಂಟರ್‌ಗೆ ಬಲಿ

08:00 AM Aug 02, 2017 | Team Udayavani |

ಕಲಬುರಗಿ: ಕೊಲೆ, ಸುಲಿಗೆ, ದರೋಡೆ ಮತ್ತಿತರ ದುಷ್ಕೃತ್ಯಗಳ ಮೂಲಕ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತಲೆ ನೋವಾಗಿದ್ದ ಕುಖ್ಯಾತ ರೌಡಿ ನಂದೂರ ಗ್ರಾಮದ ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆ ಶಿವಾನಂದ ಬಡಿಗೇರ
(21) ಮಂಗಳವಾರ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

Advertisement

ಮಂಗಳವಾರ ಬೆಳಗ್ಗೆ ನಗರದ ಹೊರ ವಲಯ ಕೆಸರಟಗಿ ಸೀಮಾಂತರದಲ್ಲಿ ಮಲ್ಲಿಕಾರ್ಜುನ ತನ್ನ ಸಹಚರರೊಂದಿಗೆ ಮೂರು ಬೈಕ್‌ಗಳಲ್ಲಿ ತಿರುಗಾಡುತ್ತಿದ್ದಾನೆಂಬ ಮಾಹಿತಿ ಮೇರೆಗೆ ಗ್ರಾಮೀಣ ಡಿವೈಎಸ್ಪಿ ಎಸ್‌.ಎಸ್‌. ಹುಲ್ಲೂರ ನೇತೃತ್ವದಲ್ಲಿ ಬಂಧಿಸಲು ಹೋದಾಗ ಎರಡು ಬೈಕ್‌ಗಳಲ್ಲಿ ಮೂವರು ಪರಾರಿಯಾಗಿದ್ದರು. ಆದರೆ ಮಲ್ಲಿಕಾರ್ಜುನ ಬೈಕ್‌ ಸ್ಕಿಡ್‌ ಆಗಿ ಬಿದ್ದಿದ್ದರಿಂದ ಆತನನ್ನು ಸುತ್ತುವರಿದು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ. ಆದರೆ ಮಲ್ಲಿಕಾರ್ಜುನ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆಯೇ ಗುಂಡು ಹಾರಿಸಿದ. ಒಂದು ಗುಂಡು ಡಿವೈಎಸ್ಪಿ ಹುಲ್ಲೂರ ಅವರ ಎದೆಯ ಮಗ್ಗುಲಿಗೆ ಬಡಿದು ಕೈಗೆ ತಗುಲಿದೆ. ಪ್ರತಿಯಾಗಿ ಮಹಾತ್ಮ ಬಸವೇಶ್ವರ ಠಾಣೆ ಸಿಪಿಐ ಶಾಂತಿನಾಥ ಮಲ್ಲಿಕಾರ್ಜುನನ ಮೇಲೆ ಗುಂಡು ಹಾರಿಸಿದ್ದಾರೆ. ಆತ ಸ್ಥಳದಲ್ಲಿಯೇ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.

ದಾಳಿಯಲ್ಲಿ ಪೇದೆಗಳಾದ ಶ್ರೀಶೈಲ, ಆನಂದ ಎಂಬುವರೂ ಗಾಯಗೊಂಡಿದ್ದಾರೆ. ಹುಲ್ಲೂರ ಹಾಗೂ ಪೇದೆಗಳಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next