Advertisement

ಎರಡೂ ಕಿಡ್ನಿ ವೈಫಲ್ಯ: ನೆರವಿಗಾಗಿ ಯಾಚನೆ

10:13 PM Dec 01, 2019 | Sriram |

ಕಾಸರಗೋಡು: ಎರಡೂ ಕಿಡ್ನಿಗಳ ವೈಫಲ್ಯ ದಿಂದ ಬಳಲುತ್ತಿರುವ ವ್ಯಕ್ತಿ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

Advertisement

ಕಾರಡ್ಕ ಚೆನ್ನಂಗೋಡು ಶಾಂತಿನಗರ ನಿವಾಸಿ ಆನಂದ ಕುಮಾರ್‌ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕೊಡುಗೈ ದಾನಿಗಳು ಮುಂದಾಗಬೇಕಾಗಿದೆ. ಹಲವು ವರ್ಷಗಳಿಂದ ಅನಿವಾಸಿಯಾಗಿ ಜೀವನ ಸಾಗಿಸಿದ ಆನಂದ ಕುಮಾರ್‌ ಅವರ ಈ ವರೆಗಿನ ಸಂಪಾದನೆ ಚಿಕಿತ್ಸೆಗಾಗಿ ವೆಚ್ಚ ಮಾಡಲಾಗಿದೆ.

ಇದೀಗ ಮುಂದಿನ ಚಿಕಿತ್ಸೆಗಾಗಿ ಅಗತ್ಯದ ಮೊತ್ತಕ್ಕಾಗಿ ದಾರಿಕಾಣದೆ ಕಂಗಾಲಾಗಿದ್ದಾರೆ. ಇದೀಗ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್‌ ಮಾಡಬೇಕಾಗಿದೆ. ಕಿಡ್ನಿ ಬದಲಾಯಿಸಿದರೆ ಮಾತ್ರವೇ ರಕ್ಷಿಸಲು ಸಾಧ್ಯವೆಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಭಾರೀ ಹಣದ ಆವಶ್ಯಕತೆಯಿದೆ. ಈ ಮೊತ್ತದ ಬಗ್ಗೆ ಕನಸು ಕಾಣಲೂ ಸಾಧ್ಯವಿಲ್ಲದ ಪರಿಸ್ಥಿತಿ ಯಲ್ಲಿದ್ದಾರೆ. ಈ ಅವಸ್ಥೆಯನ್ನು ಕಂಡ ಸ್ಥಳೀಯ ನಾಗರಿಕರು ಚಿಕಿತ್ಸಾ ಸಹಾಯ ನಿಧಿ ರೂಪೀಕರಿಸಿದ್ದು, ಸೌತ್‌ ಇಂಡಿಯನ್‌ ಬ್ಯಾಂಕ್‌ ಕಾಂಞಂಗಾಡ್‌ ಬ್ರ್ಯಾಂಚ್‌ನಲ್ಲಿ ಅಕೌಂಟ್‌ ತೆರೆಯಲಾಗಿದೆ. ಪತ್ನಿ, ಇಬ್ಬರು ಮಕ್ಕಳ ಕುಟುಂಬವನ್ನು ಸಲಹಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಆನಂದ ಕುಮಾರ್‌ ಅವರಿಗೆ ನೆರವು ನೀಡಬೇಕಾಗಿ ಕೇಳಿಕೊಳ್ಳಲಾಗಿದೆ. ಆನಂದ ಕುಮಾರ್‌ ಚಿಕಿತ್ಸಾ ಸಹಾಯ ನಿಧಿ, ಅಕೌಂಟ್‌ ನಂಬ್ರ 0632053000007037, ಐ.ಎಫ್‌.ಸಿ.ಕೋಡ್‌ SIBL 0000632, ಕಾಂಞಂಗಾಡ್‌ ಬ್ರ್ಯಾಂಚ್‌ಗೆ ನೆರವು ನೀಡುವಂತೆ ಕೇಳಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next