Advertisement

ಕಿಡ್ನಿ ವೈಫಲ್ಯ: ವ್ಯಾಟ್ಸಪ್‌ ಗ್ರೂಪ್‌ನಿಂದ ಸಹಾಯ

08:00 PM May 22, 2019 | Sriram |

ಮೂಡುಬಿದಿರೆ: ಇಲ್ಲಿನ ಶ್ರೀ ವೀರಾಂಜನೇಯ ಸೇವಾ ಸಮಿತಿ ವ್ಯಾಟ್ಸಾಪ್‌ ಗ್ರೂಪ್‌ನಿಂದ 24ನೇ ಮಾಸಿಕ ಯೋಜನೆಯಾಗಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ರಾಜೇಶ್‌ ಅವರ ಚಿಕಿತ್ಸೆಗೆ 10,000 ರೂ. ಸಹಾಯಧನದ ಚೆಕ್‌ನ್ನು ರಾಜೇಶ್‌ ಅವರ ತಾಯಿಯವರಿಗೆ ಹಸ್ತಾಂತರಿಸಲಾಯಿತು.

Advertisement

10 ರೂ. ಲಕ್ಷ ಅವಶ್ಯ 
ರಾಜೇಶ್‌ ಅವರಿಗೆ ತಾಯಿಯೇ ತನ್ನ ಕಿಡ್ನಿ ನೀಡಲು ಸಿದ್ಧರಾಗಿದ್ದು ಚಿಕಿತ್ಸೆಗೆ 10 ರೂ. ಲಕ್ಷ ಅವಶ್ಯವಿರುವುದರ ಬಗ್ಗೆ ಶ್ರೀ ವೀರಾಂಜನೇಯ ಸೇವಾ ಸಮಿತಿ ತಿಳಿದು ಈ ಕೊಡುಗೆ ನೀಡಿದೆ.

ಮಾಸಿಕ ಯೋಜನೆಯ ಧನ ಸಹಾಯ ವಿತರಿಸಿದ 28ನೇ ಕುಟುಂಬ ಇದಾಗಿದೆ ಎಂದು ಗ್ರೂಪ್‌ ಪ್ರಮುಖರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next