Advertisement

ಮಲೇಶ್ಯ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌ ದ್ವಿತೀಯ ಸುತ್ತಿಗೆ

06:00 AM Jun 28, 2018 | Team Udayavani |

ಜಕಾರ್ತಾ: ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ ಪಿ.ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ “ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ’ಯಲ್ಲಿ  ದ್ವಿತೀಯ ಸುತ್ತಿಗೆ ಕಾಲಿಟ್ಟಿದ್ದಾರೆ. 

Advertisement

ಮಹಿಳೆಯರ ಸಿಂಗಲ್ಸ್‌ ವಿಭಾಗದ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸೆಣಸಿದ ಸಿಂಧು, ಜಪಾ ನ್‌ನ ಅಯಾ ಒಹೋರಿ ವಿರುದ್ಧ 26 -24, 21- 15 ಅಂತರದ ಜಯ ಸಾಧಿಸಿದರು. ದ್ವಿತೀಯ ಸುತ್ತಿನಲ್ಲಿ ಸಿಂಧು ಸ್ಥಳೀಯ ಆಟಗಾರ್ತಿ ಯಿಂಗ್‌ಯಿಂಗ್‌ ಲೀ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಕೆ. ಶ್ರೀಕಾಂತ್‌ ಡೆನ್ಮಾರ್ಕ್‌ನ ಜಾನ್‌ ಒ ಜರ್ಗೆ ನ್ಸನ್‌ ಅವರನ್ನು 21 -18, 21- 9 ಅಂತರದಿಂದ ಮಣಿಸಿ ಮುನ್ನಡೆದರು. ದ್ವಿತೀಯ ಸುತ್ತಿನಲ್ಲಿ ಅವರು ಚೈನೀಸ್‌  ತೈಪೆಯ ವಾಂಗ್‌ ತ್ಸು ವೆಯ್‌ ವಿರುದ್ಧ ಸೆಣಸಲಿದ್ದಾರೆ.

ಸಮೀರ್‌, ಪ್ರಣೀತ್‌ಗೆ ನಿರಾಸೆ
ಭಾರತೀಯ ಮತ್ತಿಬ್ಬರು ಆಟಗಾರರಾದ ಸಾಯಿ ಪ್ರಣೀತ್‌ ಮತ್ತು ಸಮೀರ್‌ ವರ್ಮ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ. ಸಾಯಿ ಪ್ರಣೀತ್‌ ಅವರು ಚೈನೀಸ್‌ ತೈಪೆಯ ವಾಂಗ್‌ ತ್ಸು ವೆಯ್‌ ವಿರುದ್ಧ 12-21, 7-21ಅಂತರದಲ್ಲಿ ಸೋತರೆ, ಸಮೀರ್‌ ಇಂಡೋ ನೇಶ್ಯದ ಟಾಮಿ ಸುಗಿಯಾತೊ ವಿರುದ್ಧ 13-21, 5-21 ಅಂತರದಿಂದ ಪರಾಭವಗೊಂಡರು.

ಸೈನಾಗೆ ಯಮಗುಚಿ ಎದುರಾಳಿ
ಮಹಿಳಾ ಸಿಂಗಲ್ಸ್‌ ವಿಭಾಗದ ತಮ್ಮ ಮೊದಲ ಪಂದ್ಯದಲ್ಲಿ ಹಾಂಕಾಂಗ್‌ನ ಯಿಪ್‌ಯಿನ್‌ ವಿರುದ್ಧ ಗೆಲುವು ಪಡೆದು ದ್ವಿತೀಯ ಸುತ್ತಿಗೆ ಏರಿದ್ದ ಸೈನಾ, ಜಪಾನ್‌ನ ಅಕಾನೆ ಯಮಾಗುಚಿ ವಿರುದ್ಧ ಸೆಣಸಲಿದ್ದಾರೆ. ಈವರೆಗೆ ಇವರಿಬ್ಬರೂ 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಯಮಾಗುಚಿ 5 ಬಾರಿ ಗೆಲುವು ಸಾಧಿಸಿದರೆ, ಸೈನಾ ಕೇವಲ ಒಮ್ಮೆ ಮಾತ್ರ ಗೆದ್ದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next