Advertisement

ಖಟ್ಟರ್‌ ಹೇಳಿಕೆ ವಿವಾದ

12:03 PM Nov 19, 2018 | Team Udayavani |

ಗುರುಗ್ರಾಮ: ಅತ್ಯಾಚಾರಗಳಿಗೆ ಸಂಬಂಧಿಸಿ ಹರ್ಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿಲ್ಲ. ಅವುಗಳು ಹಿಂದೆಯೂ ನಡೆಯುತ್ತಿದ್ದವು, ಈಗಲೂ ನಡೆಯುತ್ತಿವೆ. ಶೇ. 80-ಶೇ.90ರಷ್ಟು ಪ್ರಕರಣಗಳಲ್ಲಿ ಪರಸ್ಪರ ಪರಿಚಿತರೇ ಆಗಿರುತ್ತಾರೆ. ಒಂದು ದಿನ ಯಾವುದೋ ಕಾರಣಕ್ಕೆ ಜಗಳ ನಡೆಯುತ್ತದೆ. ಅನಂತರ ಆತ ನನ್ನ ಮೇಲೆ ಅತ್ಯಾಚಾರ ಮಾಡಿದ ಎಂದು ಆಕೆ ದೂರು ನೀಡುತ್ತಾಳೆ’ ಎಂದು ಖಟ್ಟರ್‌ ಹೇಳಿದ್ದರು. ಈ ಹೇಳಿಕೆಗೆ ಕಾಂಗ್ರೆಸ್‌, ಆಪ್‌ ಸೇರಿದಂತೆ ಹಲವು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಖಟ್ಟರ್‌, ನನ್ನ ಹೇಳಿಕೆ ತಿರುಚಲಾಗಿದೆ. ತನಿಖೆಯ ಹಂತದಲ್ಲಿ ಏನು ಕಂಡುಬಂದಿದೆಯೋ ಅದನ್ನೇ ಉಲ್ಲೇಖೀಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next