Advertisement

ಫೈಲ್‌ ನಡಕೊಂಡು ಬರ್ತಾವೇನ್ರಿ?: ತಮ್ಮದೇ ಸಚಿವರಿಗೆ ಖರ್ಗೆ ತರಾಟೆ

03:45 AM Jan 23, 2017 | Team Udayavani |

ಕಲಬುರಗಿ: ಹೈದರಾಬಾದ್‌ ಕರ್ನಾಟಕ ಭಾಗದ ಲೋಕೋಪಯೋಗಿ ಇಲಾಖೆಯ ಚೀಫ್‌ ಇಂಜಿನಿಯರ್‌ ಕಚೇರಿ ಕಲಬುರಗಿಯಲ್ಲಾಗಲಿ ಎನ್ನುವ ನಮ್ಮ ಒತ್ತಾಸೆಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ, ವೇದಿಕೆಯಲ್ಲಿದ್ದ ತಮ್ಮದೇ ಪಕ್ಷದ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರನ್ನು ತರಾಟೆ ತೆಗೆದುಕೊಂಡರು.

Advertisement

ಭಾನುವಾರ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “371(ಜೆ) ಕಲಂ ಅಡಿ ಹೈ-ಕ ಭಾಗಕ್ಕೆ ವಿಶೇಷ ಸ್ಥಾನ ಲಭಿಸಿರುವ ಹಿನ್ನೆಲೆಯಲ್ಲಿ ನಮಗೆ ಪ್ರತ್ಯೇಕ ಸಿಇ ಕಚೇರಿ ಅಗತ್ಯವಿದೆ. ಪ್ರತಿಯೊಂದು ಯೋಜನೆ ಫೈಲುಗಳು 600 ಕಿ.ಮೀ. ದೂರದ ಬೆಂಗಳೂರಿಗೆ ಹೋಗಿ ಬರಲು ವರ್ಷಗಳೇ ಬೇಕಾಗುತ್ತಿದ್ದು, ಅಭಿವೃದ್ಧಿ ಕುಂಠಿತವಾಗುತ್ತಿದೆ. ಫೈಲುಗಳು ನಡಕೊಂಡು ಹೋಗಿ, ನಡಕೊಂಡು ಬರ್ತಾವೇನ್ರಿ?ಹಿಂಗಾಗಿ ಲೇಟಾಗ್ತಿದೆ ಅಲಿÅ.. ಸಚಿವ ಶರಣಪ್ರಕಾಶರೇ.. ಏನಿದು?’ ಎಂದು ಸಭೆಯಲ್ಲಿದ್ದ ಸಚಿವರಿಗೆ ಪ್ರಶ್ನಿಸಿದರು.

ಖರ್ಗೆ ಅವರ ಮಾತಿನ ದಾಳಿಗೆ ಗಲಿಬಿಲಿಗೊಂಡ ಸಚಿವ ಡಾ| ಶರಣಪ್ರಕಾಶ ಪಾಟೀಲ, “ಸರ್‌ ಮೊನ್ನೆ ಅನುಮತಿ ಸಿಕ್ಕಿದೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗುತ್ತದೆ’ ಎಂದು ಹೇಳಿದರೂ, ಖರ್ಗೆ ಮಾತಿನ ವರಸೆ ಬಿಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next