Advertisement

ಖರ್ಗೆ “ಮೀಸಲು’ಆರೋಪ ಕೀಳು ಅಭಿರುಚಿ

11:25 PM Feb 10, 2020 | Lakshmi GovindaRaj |

ಚಿಕ್ಕಮಗಳೂರು: ಮೀಸಲಾತಿ ಕುರಿತು ಸುಪ್ರೀಂಕೋರ್ಟ್‌ ತೀರ್ಪು ಬಂದ ನಂತರ ಬಿಜೆಪಿ ವಿರುದ್ಧ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡುವುದು ಅವರ ಕೀಳು ಅಭಿರುಚಿ ತೋರಿಸುತ್ತದೆ ಎಂದು ಸಚಿವ ಸಿ.ಟಿ. ರವಿ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಮೀಸಲಾತಿ ವಿರುದ್ಧ ಇದೇ ಮೊದಲ ಬಾರಿ ತೀರ್ಪು ಬಂದಿಲ್ಲ. ಕಾಂಗ್ರೆಸ್‌ ಅಧಿ ಕಾರದಲ್ಲಿದ್ದಾಗಲೂ ಬಂದಿದೆ. ನಾವು ಅದಕ್ಕೆ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಕಾರಣ ಎಂದು ಹೇಳಿಲ್ಲ.

Advertisement

ಸಮ ಸಮಾಜ ಶೀಘ್ರವೇ ನಿರ್ಮಾಣವಾಗಬೇಕೆಂದು ಅಂಬೇಡ್ಕರ್‌ ಅವರು ಮೀಸಲಾತಿಯನ್ನು 10 ವರ್ಷಕ್ಕೆ ಸೀಮಿತಗೊಳಿಸಿದ್ದರು. ಅದು ಕಾಲಕಾಲಕ್ಕೆ ವಿಸ್ತರಿಸಲಾಗಿದೆ. ಬಡ್ತಿ ಮೀಸಲಾತಿಗೆ ಸಂಬಂ ಧಿಸಿದಂತೆ ಪ್ರಧಾನಿ ಮೋದಿ ಸರ್ಕಾರ ಅಗತ್ಯ ಕಾನೂನು ಮಾರ್ಪಾಡು ಮಾಡಿ ಮುಂದುವರಿಸುವ ಕೆಲಸ ಮಾಡಿದ್ದಾರೆ. ಇದು ಗೊತ್ತಿದ್ದರೂ ಆರೋಪಿಸುತ್ತಿರುವುದು ಕೀಳು ಮನಸ್ಥಿತಿ ತೋರಿಸುತ್ತದೆ ಎಂದರು.

ಸುಪ್ರೀಂಕೋರ್ಟ್‌ ಸಂವಿಧಾನದ ವಿಶ್ಲೇಷಣೆಯಡಿಯಲ್ಲಿ ತೀರ್ಪು ನೀಡಿದೆ. ಖರ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿರುವುದು ಸಣ್ಣತನದ ರಾಜಕಾರಣ. ಖರ್ಗೆಯವರಿಗೂ ಮೀಸಲಾತಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರು ವಿಮರ್ಶೆ ಮಾಡಿಕೊಳ್ಳಲಿ. ಬಲಾಡ್ಯರಿಗೆ ದಲಿತ ಪಟ್ಟ ಬೇಡ, ಬಡ ದಲಿತರಿಗೆ ಪಟ್ಟಬೇಕು. ಬಡ ದಲಿತರಿಗೆ ಮೀಸಲಾತಿ ಸಿಗಬೇಕು. ಬಲಾಡ್ಯರು ಬಡ ದಲಿತರ ಮೀಸಲಾತಿ ಕಿತ್ತುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next