Advertisement

ಉ.ಪ್ರ.ದಲ್ಲಿ ಖಲಿಸ್ಥಾನ ಉಗ್ರ ಸೆರೆ

11:00 AM Jun 01, 2020 | mahesh |

ಮೀರತ್‌: ಪಂಜಾಬ್‌ ಪೊಲೀಸರು ಮತ್ತು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಖಲಿಸ್ಥಾನ ಉಗ್ರನನ್ನು ಮೀರತ್‌ನಲ್ಲಿ ಬಂಧಿಸಲಾಗಿದೆ. ಆತನನ್ನು ತಿರತ್‌ ಸಿಂಗ್‌(32) ಎಂದು ಗುರುತಿಸಲಾಗಿದೆ. ಆತ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ಥಾನ ಚಳವಳಿ ಕುರಿತು ಪ್ರಚಾರ ಮಾಡುತ್ತಿದ್ದ. ಆತನ ಬಳಿ ಜರ್ನೈಲ್‌ ಸಿಂಗ್‌, ಬಿಂದ್ರನ್‌ವಾಲೆ ಮತ್ತಿತರ ಖಲಿಸ್ತಾನಿ ಉಗ್ರರ ಪರ ಪೋಸ್ಟರ್‌ಗಳು ದೊರಕಿವೆ ಎಂದು ಅವರು ಹೇಳಿದ್ದಾರೆ. ಪಂಜಾಬ್‌ ಪೊಲೀಸರು ಮೀರತ್‌ನಲ್ಲಿ ಆತನ ಇರುವಿಕೆ ಕುರಿತು ಮಾಹಿತಿ ನೀಡಿದ ಬಳಿಕ ಕಾರ್ಯಾಚರಣೆ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next