Advertisement

ಖಾದಿಗೆ ಉತ್ತೇಜನ ಸಿಗಲಿ: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

11:21 PM Sep 23, 2022 | Team Udayavani |

ಬೆಂಗಳೂರು: ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಡಿ ಖಾದಿ ಉದ್ಯಮವು ನಡೆಯುತ್ತಿದೆ. ಖಾದಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ಸಹಕರಿಸೋಣ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಶುಕ್ರವಾರ ಕಲಾಪದ ಅಂತ್ಯದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 200ಕ್ಕೂ ಅಧಿಕ ಖಾದಿ ಉತ್ಪನ್ನ ಮಳಿಗೆಗಳಿವೆ.

ಖಾದಿ ಉದ್ಯಮವನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಅ.2(ಗಾಂಧಿ ಜಯಂತಿ)ರಂದು ನಾವೆಲ್ಲರೂ (ಶಾಸಕರು, ಸಚಿವರು, ಜನಪ್ರತಿನಿಧಿಗಳು) ಖಾದಿ ಉತ್ಪನ್ನ ಖರೀದಿಸಬೇಕು.

ಈ ಮೂಲಕ ಖಾದಿಗೆ ಉತ್ತೇಜನ ನೀಡಬೇಕು ಎಂದು ಸಚಿವ ಎಂಟಿಬಿ ನಾಗರಾಜ ಅವರು ಕೋರಿಕೆ ಸಲ್ಲಿಸಿದ್ದಾರೆ. ಆ ನಿಟ್ಟಿನಲ್ಲಿ ನಾವು ಮುಂದಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next