Advertisement

Finally ಉತ್ತರ ಕನ್ನಡಕ್ಕೆ ಕಾಗೇರಿ; ಬಿಜೆಪಿಯಲ್ಲಿ ಬಿಕ್ಕಟ್ಟೊ,ಒಕ್ಕಟ್ಟೊ?!

09:53 PM Mar 24, 2024 | Team Udayavani |

ಶಿರಸಿ: ಕರ್ನಾಟಕ ವಿಧಾನ ಸಭೆಯ‌ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ‌ಕಾಗೇರಿ ಅವರು ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಪ್ರಕಟವಾಗಿದೆ.

Advertisement

ಆರು ಸಲ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅವರನ್ನು ಕೈಬಿಟ್ಟು ಕಾಗೇರಿ ಅವರ ಹೆಸರನ್ನು ಅಂತಿಮಗೊಳಿಸಿದೆ. ಕಾಗೇರಿ, ಅನಂತ್ ಹಾಗೂ ಹರಿಪ್ರಕಾಶ ಕೊಣೆಮನೆ ಅವರ ನಡುವೆ ಹೆಸರು ಓಡಾಟ ಇತ್ತು. ಅಂತಿಮ ಹಂತದಲ್ಲಿ ಸಂಸದ ಹೆಗಡೆ ಅವರು ಟಿಕೆಟ್ ಮರಳಿ ಪಡೆದರು ಎಂಬಂತಾಗಿತ್ತು. ಈಗ ಕಾಗೇರಿ ಅವರಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದೆ. ಕಾಂಗ್ರೆಸ್ ನ ಡಾ. ಅಂಜಲಿ ಲಿಂಬಾಳ್ಕರ್ ಹಾಗೂ ಕಾಗೇರಿ ನಡುವೆ ನೇರ ಸ್ಪರ್ಧೆ ನಡೆಯಲಿದೆ.

ಕಾಗೇರಿ ಅವರು ಎಬಿವಿಪಿ ಪ್ರಮುಖರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಆರು ಸಲ ವಿಧಾನ ಸಭೆಯ ಸದಸ್ಯರಾಗಿ, ಸಿಎಂ ಸಂಸದೀಯ ಕಾರ್ಯದರ್ಶಿಯಾಗಿ, ಶಿಕ್ಷಣ ಸಚಿವರಾಗಿ ಕೂಡ ಕಾರ್ಯ ಮಾಡಿದ್ದರು. ಅನಂತಕುಮಾರ ಹೆಗಡೆ ಹಾಗೂ ಕಾಗೇರಿ ಅವರ ನಡುವೆ ಬಿಕ್ಕಟ್ಟೊ, ಒಕ್ಕಟ್ಟೊ ಎಂಬುದು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next