Advertisement

ಹೊನ್ನಾವರದ ಇಕೋ ಬೀಚ್‌ನಲ್ಲಿ  ಖಡಕ್‌ ಸಿನಿಮಾ ಚಿತ್ರೀಕರಣ

08:47 PM Apr 20, 2021 | Team Udayavani |

ಹೊನ್ನಾವರ: ಇಕೋ ಬೀಚ್‌ ಸುತ್ತಮುತ್ತ ಖಡಕ್‌ ಸಿನಿಮಾ ಚಿತ್ರೀಕರಣ ನಡೆದಿದ್ದು, ಜಿಲ್ಲೆಯ ಪ್ರಕೃತಿ ಸೊಬಗು, ಸಿನೆಮಾದ ಕುರಿತು ನಾಯಕ ನಟ ಧರ್ಮ ಕೀರ್ತಿರಾಜ್‌ ಸಂತಸ ವ್ಯಕ್ತಪಡಿಸಿದರು.

Advertisement

ಬಳ್ಕೂರಿನ ಶ್ರೀ ನೀಲಗೋಡೇಶ್ವರಿ ದೇವಾಲಯದ ಸುತ್ತಮುತ್ತಲಿನ ಪರಿಸರದಲ್ಲಿ ದೃಶ್ಯಾವಳಿ ಸೆರೆಹಿಡಿದ ಚಿತ್ರ ತಂಡ ನಂತರ ಇಕೋ ಬೀಚ್‌ನಲ್ಲಿ ಹಾಗೂ ಗಾರ್ಡನ್‌ನಲ್ಲಿ ಚಿತ್ರದಲ್ಲಿನ ಹಾಡೊಂದರ ಚಿತ್ರೀಕರಣ ನಡೆಸಿತು. ಸಿನಿಮಾ ಶೂಟಿಂಗ್‌ ನಡೆಯುತ್ತಿರುವುದನ್ನು ಕಂಡು ನಾಯಕ ನಟ ಕೀರ್ತಿ ಧರ್ಮರಾಜ್‌ ಅವರೊಂದಿಗೆ ಫೋಟೋ ಕ್ಲಿಕ್‌ ಮಾಡಿಕೊಳ್ಳಲು ಜನರು ಮುಗಿಬಿದ್ದರು.

ಸಿನಿಮಾಕ್ಕೆ ರಾಜರತ್ನ ಎಂಬುವವರು ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವಲ್ಲಿ ಹಾಗೂ ಸಿದ್ಧರಾಮಯ್ಯ ಸಿಂಗಾಪುರ ಈ ಚಿತ್ರ ನಿರ್ಮಿಸುತ್ತಿದ್ದಾರೆ. ನಟ ಧರ್ಮ ಕಿರ್ತಿರಾಜ್‌ ಮಾತನಾಡಿ, ಉತ್ತರ ಕನ್ನಡಕ್ಕೆ ಸಿನಿಮಾ ಚಿತ್ರೀಕರಣಕ್ಕೆ ಬಂದಾಗ ಜನರು ನಮಗೆ ತೋರುವ ಪ್ರೀತಿ ಬಹಳವೇ ಇಷ್ಟವಾಯಿತು.

ಶಂಕರ್‌ನಾಗ್‌ ಅವರಂತಹ ಮಹಾನ್‌ ನಟರನ್ನು ನೀಡಿದ ಜಿಲ್ಲೆಗೆ ಆಗಮಿಸಿರುವುದು ಸಂತಸದ ಸಂಗತಿ. ಇಲ್ಲಿನ ಪ್ರಕೃತಿ ಸೊಬಗು, ರಮಣೀಯ ತಾಣಗಳ ಬಗ್ಗೆ ವರ್ಣಿಸಿದರು. ಕೇವಲ ನಾಲ್ಕೈದು ದಿನ ಜಿಲ್ಲೆಯಲ್ಲಿ ಚಿತ್ರೀಕರಣ ನಡೆಸಬೇಕೆಂದಿದ್ದೇವು. ಆದರೆ ಇಲ್ಲಿನ ಸುಂದರ ತಾಣ ನೋಡಿದಾಗ ಇನ್ನಷ್ಟು ದಿನ ಚಿತ್ರೀಕರಣ ನಡೆಸಬೇಕೆನಿಸುತ್ತಿದೆ ಎಂದರು.

ಕೊವಿಡ್‌ನಿಂದ ಎಲ್ಲ ರೀತಿಯಿಂದಲೂ ಸಮಸ್ಯೆಯಾಗಿದೆ. ಕೋವಿಡ್‌ ಸಂದರ್ಭದಲ್ಲಿ ಕೆಲ ವೃತ್ತಿಯನ್ನು ವರ್ಕ್‌ ಪ್ರಾಮ್‌ ಹೋಮ್‌ ಆಗಿ ಮಾಡಬಹುದು. ಆದರೆ ಸಿನಿಮಾ ಚಿತ್ರೀಕರಣದಲ್ಲಿ ಅದು ಸಾಧ್ಯವಾಗುವುದಿಲ್ಲ. ಆದರೂ ಕೋವಿಡ್‌ನಿಂದ ದೂರ ಊಳಿಯಲು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿ ಚಿತ್ರೀಕರಣ ನಡೆಸುತ್ತಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next