Advertisement

ಸಾಗರದ ಕೆರೆಕೋಡಿ ಆಂಜನೇಯ ಸ್ವಾಮಿ 

12:06 PM Jun 09, 2018 | |

ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ ಇದಾಗಿದೆ. ಶಿಥಿಲಾವಸ್ಥೆ ಹೊಂದಿದ್ದ ಈ ದೇವಾಲಯವನ್ನು 2000-2001 ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ದೇವಾಲಯದ ದ್ವಾರ ದಕ್ಷಿ ಣಾಭಿಮುಖವಾಗಿದ್ದು ದೇವರ ಮೂರ್ತಿ ಪೂರ್ವಾಭಿಮುಖವಾಗಿದೆ. ಪ್ರತಿ ಶನಿವಾರ ಬೆಣ್ಣೆ ಅಲಂಕಾರ, ಹೂವಿನ ಅಲಂಕಾರ ಉತ್ಸವ ಪೂಜೆ ನಡೆಯುತ್ತದೆ. 

Advertisement

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕೇಂದ್ರವು ವೈವಿಧ್ಯಮಯ ದೇವಾಲಯಗಳ ತವರೂರು. ಪಟ್ಟಣದ ಪ್ರತಿ ಬೀದಿಯಲ್ಲೂ ,ಪ್ರತಿ ತಿರುವಿನಲ್ಲೂ,ಪ್ರತಿ ವೃತ್ತದಲ್ಲೂ ಯಾವುದಾದರೊಂದು ದೇವಾಲಯ ಗೋಚರಿಸುತ್ತದೆ. ಸಾಗರದ ಪ್ರಮುಖ ಆಕರ್ಷಣೀಯ ಮತ್ತು ಐತಿಹಾಸಿಕ ಮಹತ್ವದ ಗಣಪತಿ ಕೆರೆಯ ಕೋಡಿಯ ಬಳಿ ಇರುವ 
ಶ್ರೀಕೆರೆಕೋಡಿ ಆಂಜನೇಯ ಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧವಾಗಿದೆ. 

  ಈ ದೇವಾಲಯದ ಸ್ಥಾಪನೆಯ ಸ್ಥಳ ಪುರಾಣ ವಿಜಯನರದ ಸಾಮ್ರಾಜ್ಯದ ಕಾಲಕ್ಕೆ ಸೇರಿದೆ. ಶ್ರೀಕೃಷ್ಣ ದೇವರಾಯನ ಆಳ್ವಿಕೆಯ ಕಾಲದಲ್ಲಿ ಶ್ರೀವ್ಯಾಸಮುನಿಗಳು ಆಂಜನೇಯನ ಪರಮ ಭಕ್ತರು ಮತ್ತು ಆರಾಧಕರಾಗಿದ್ದರು.  ತಾವು ಸಂಚರಿಸಿದ ಸ್ಥಳದಲ್ಲೆಲ್ಲ ಆಂಜನೇಯನ ಗುಡಿ ಸ್ಥಾಪಿಸಿ, ನಿತ್ಯ ಪೂಜೆಗೆ ವ್ಯವಸ್ಥೆ ಕಲ್ಪಿಸಿದ್ದರು.  ಅವರು ರಾಜ್ಯದಾದ್ಯಂತ ಸುಮಾರು 700 ಆಂಜನೇಯನ ದೇವಾಲಯ ಸ್ಥಾಪಿಸಿದ್ದಾರೆಂದು ಪ್ರತೀತಿ ಇದೆ. ಕೆಳದಿಯ ಅರಸರು ವಿಜಯನಗರದ ಸಾಮಂತ ರಾಜರಾಗಿ ಆಡಳಿತ ನಡೆಸುತ್ತಿದ್ದರು. ಕೆಳದಿ ಅರಸರ ಕೋರಿಕೆಯ ಮೇರೆಗೆ  ಶ್ರೀವ್ಯಾಸರಾಯರು ಸಾಗರಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿಯೇ ಈ  ಆಂಜನೇಯನ ವಿಗ್ರಹ ಸ್ಥಾಪಿಸಿ ಪೂಜಿಸಿದ್ದರು. ಕೆಳದಿ ಅರಸರು ಕಲ್ಲು ಮತ್ತು ನಾಡ ಹಂಚಿನ ಗುಡಿಯನ್ನು ಸಹ ಕಟ್ಟಿಸಿದ್ದರು ಎನ್ನಲಾಗಿದೆ. 

ಕೆಳದಿ ಅರಸರು ದಿಗ್ವಿಜಯಕ್ಕೆ ಹೊರಡುವ ಸಂದರ್ಭದಲ್ಲಿ ಇಲ್ಲಿನ ಆಂಜನೇಯನಿಗೆ ಪೂಜೆ ಸಲ್ಲಿಸಿ ಹೊರಡುತ್ತಿದ್ದರು. ದಿಗ್ವಿಜಯದ ನಂತರ ಹಿಂತಿರುಗಿ ಬಂದು ವೈಭವದ ಉತ್ಸವ ಪೂಜೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಸದಾಶಿವ ನಾಯಕನು ಸದಾಶಿವ ಸಾಗರ ಎಂಬ ಹೆಸರಿನಲ್ಲಿ ಸಾಗರ ಪಟ್ಟಣ ಕಟ್ಟಿಸಿದ್ದಾಗ ಗಣಾಧೀಶ್ವರ ದೇವಾಲಯ ಮತ್ತು ಆಂಜನೇಯನ ಗುಡಿ, ಪೂರ್ವ ದಿಕ್ಕಿನ ಗಡಿಯ ಪ್ರದೇಶವಾಗಿತ್ತು. ಇದಕ್ಕಾಗಿ ಹಿಂದೆ ಈ ದೇಗುಲಕ್ಕೆ ಕೋಟೆ ಆಂಜನೇಯ ಎಂಬ ಹೆಸರಿತ್ತು. ಈ  ಸ್ಥಳದಲ್ಲಿ ಗಣಪತಿ ಕೆರೆಯ ಕೋಡಿ ಇರುವ ಕಾರಣ ಕೆರೆಕೋಡಿ ಆಂಜನೇಯ ದೇವಾಲಯ ಎಂಬ ಹೆಸರು ಬಂದಿತು ಎನ್ನುತ್ತಾರೆ. 

 ಶಿಥಿಲಾವಸ್ಥೆ ಹೊಂದಿದ್ದ ಈ ದೇವಾಲಯವನ್ನು 2000-2001 ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. 2001ರಲ್ಲಿ ಮಂತ್ರಾಲಯದ ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀಸುಶಮೀಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಮುಖ್ಯಪ್ರಾಣ ದೇವರ ಪ್ರಾಣಪ್ರತಿಷ್ಠೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು.
ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ ಇದಾಗಿದೆ. ಆಗಿನ ಸಮಿತಿಯ ಮುಖ್ಯಸ್ಥರಾದ ದಿವಂಗತ ಸುಮತೀಂದ್ರ ಆಚಾರ್‌ರ ಮಾರ್ಗದರ್ಶನದಲ್ಲಿ  ದೇವಾಲಯದ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡವು. ಭಕ್ತರ ಉದಾರ ಕೊಡುಗೆಯಿಂದ ದೇವಾಲಯದ ಮುಂಭಾಗದ ಮುಖ ಮಂಟಪ, ತೆರೆದಬಾವಿ, ಅರ್ಚಕರ ವಸತಿ ಇತ್ಯಾದಿಗಳು ನಡೆದಿವೆ.

Advertisement

ದೇವಾಲಯದ ದ್ವಾರ ದಕ್ಷಿ ಣಾಭಿಮುಖವಾಗಿದ್ದು ದೇವರ ಮೂರ್ತಿ ಪೂರ್ವಾಭಿಮುಖವಾಗಿದೆ. ಮಾಧ್ವ ಸಿದ್ಧಾಂತದ ಪ್ರಕಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ನಿತ್ಯ ಪೂಜೆ ನಡೆಸಲಾಗುತ್ತದೆ. ಪ್ರತಿ ಶನಿವಾರ ಬೆಣ್ಣೆ ಅಲಂಕಾರ, ಹೂವಿನ ಅಲಂಕಾರ ಉತ್ಸವ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಮಾಧ್ವ ನವಮಿಯಂದು ವಿಶೇಷ ಉತ್ಸವ , ಪಲ್ಲಕ್ಕಿ ಉತ್ಸವ ಮಹಾ ಪೂಜೆ ನಡೆಸಲಾಗುತ್ತದೆ.ಕಾರ್ತಿಕ ಅಮಾವಾಸ್ಯೆಯಂದು ಭಕ್ತರೋರ್ವರ ಪ್ರಾಯೋಜಕತ್ವದಲ್ಲಿ ಮುಖ ಮಂಟಪದಿಂದ ಗರ್ಭ ಗುಡಿಯ ವರೆಗೆ ಹೂವಿನ ಅಲಂಕಾರ, ಭಕ್ತರಿಂದ ಲಕ್ಷ ದೀಪೋತ್ಸವ ನಡೆಯುತ್ತದೆ.  ಪ್ರತಿ ವರ್ಷ ವೈಶಾಖ ಅಮಾವಾಸ್ಯೆಯಂದು ಶನೈಶ್ಚರ ಜಯಂತಿಯೂ ವೈಭವದಿಂದ ನಡೆಯುತ್ತದೆ. ಸಾವಿರಾರು ಭಕ್ತರು  ಆಗಮಿಸಿ ಎಳ್ಳಿನ ಬತ್ತಿ ದೀಪದ ಸೇವೆ ನಡೆಸುತ್ತಾರೆ. ಚೈತ್ರ ಪೂರ್ಣಿಮೆಯಂದು ಅರ್ಚಕರು ತಮ್ಮ ವೈಯಕ್ತಿಕ ಹರಕೆಯಾಗಿ ಉತ್ಸವ ಪೂಜೆ ಮತ್ತು ಸಮಾಜ ಬಾಂಧವರಿಗೆ ಅನ್ನ ಸಂತರ್ಪಣೆ ನಡೆಸುತ್ತಾರೆ.

ಬಾಲಗ್ರಹ ಪೀಡೆ ನಿವಾರಣೆ, ಭೂತ ಪ್ರೇತಾದಿ ಪೀಡೆ ನಿವಾರಣೆ, ವಿದ್ಯೆ , ಉದ್ಯೋಗ, ಸಂತಾನ ಪ್ರಾಪ್ತಿ, ಮಾನಸಿಕ ಕ್ಲೇಷ ನಿವಾರಣೆ, ಕುಟುಂಬ ಶಾಂತಿ ಇತ್ಯಾದಿಗಳಿಗೆ ಭಕ್ತರು ಇಲ್ಲಿಗೆ ಆಗುಸಿ ಅರ್ಚಕರಿಂದ ತಾುತ ಪಡೆದು ದೇವರಿಗೆ ಹರಕೆ ಹೊತ್ತು ಸಾಗಿ ಉತ್ತಮ ಫ‌ಲ ಪಡೆಯುತ್ತಿದ್ದಾರೆ. ಕೃ ಬೆಳೆಗಳಿಗೆ ಮಂಗಗಳ ಹಾವಳಿುಂದ ಮುಕ್ತಿ ದೊರಕಿಸಲು ಜೋಡು ತೆಂಗಿನ ಕಾಯಿ ಹರಕೆ ಹೊತ್ತು ಕೇಸರಿ ಪತಾಕೆ ಪಡೆದು ಜುàನಿನಲ್ಲಿ ಪತಾಕೆ ಸ್ಥಾಪಿಸಿ ಯಶಸ್ವಿಯಾಗುತ್ತಿದ್ದಾರೆ.

ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next