Advertisement

ತಮಿಳುನಾಡಿನತ್ತ ಮುಖ ಮಾಡಿದ ಕೇರಳದ ಸಂದೀಪ್‌ ವಾರಿಯರ್‌

03:32 AM Jun 12, 2020 | Sriram |

ತಿರುವನಂತಪುರ: ಕೇರಳ ಕ್ರಿಕೆಟ್‌ ತಂಡದ ಪ್ರಧಾನ ವೇಗಿ ಸಂದೀಪ್‌ ವಾರಿಯರ್‌ ರಣಜಿ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಲು ಬಯಸಿದ್ದಾರೆ. ಇದು ತನ್ನ ವೈಯಕ್ತಿಕ ನಿರ್ಧಾರವಾಗಿದ್ದು, ಇದನ್ನು ಪರಿಗಣಿಸಿ ಅನುಮತಿ ನೀಡಬೇಕೆಂದು ಕೇರಳ ಕ್ರಿಕೆಟ್‌ ಮಂಡಳಿಗೆ (ಕೆಸಿಎ) ಲಿಖೀತವಾಗಿ ಮನವಿ ಮಾಡಿದ್ದಾರೆ.

Advertisement

ಒಂದು ವೇಳೆ ಸಂದೀಪ್‌ ವಾರಿಯರ್‌ಗೆ ಅನುಮತಿ ನೀಡಿದ್ದೇ ಆದರೆ ಕೇರಳ ಕ್ರಿಕೆಟ್‌ ತಂಡಕ್ಕೆ ಇದರಿಂದ ಭಾರೀ ಹೊಡೆತ ಬೀಳಲಿದೆ. ಆದರೆ ಇದೇ ವೇಳೆ ನಿಷೇಧ ಮುಕ್ತ ಎಸ್‌. ಶ್ರೀಶಾಂತ್‌ 7 ವರ್ಷಗಳ ಬಳಿಕ ಕೇರಳ ರಣಜಿ ತಂಡವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಕೆಸಿಎ ಸಮಾಧಾನಪಟ್ಟಿದೆ. 2018-19ರ ರಣಜಿ ಋತುವಿನಲ್ಲಿ ವಾರಿಯರ್‌ 44 ವಿಕೆಟ್‌ ಹಾರಿಸಿ ಸುದ್ದಿಯಾಗಿದ್ದರು. ಅಂದು ಕೇರಳ ರಣಜಿ ಸೆಮಿಫೈನಲ್‌ ಪ್ರವೇಶಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next